CinemaCrime

Vijayalakshmi; ನಾನು ಸಾಯುತ್ತಿದ್ದೇನೆ, ಸಾವಿಗೆ ಅವನೇ ಕಾರಣ; ನಟಿ ವಿಜಯಲಕ್ಷ್ಮೀ ವಿಡಿಯೋ

ಬೆಂಗಳೂರು; ನಟಿ ವಿಜಯಲಕ್ಷ್ಮೀ ಆಗೋಮ್ಮೆ ಈಗೊಮ್ಮೆ ರಾದ್ಧಾಂತಗಳನ್ನು ಮಾಡಿಕೊಳ್ಳುವುದು ಗೊತ್ತೇ ಇದೆ. ಒಂದು ಕಾಲದಲ್ಲಿ ಕನ್ನಡದಲ್ಲಿ ಸೂಪರ್‌ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದ ನಟಿ ವಿಜಯಲಕ್ಷ್ಮೀ.. ಆದ್ರೆ ಕೆಲ ವರ್ಷಗಳಿಂದ ಅವರು ಮಾನಸಿಕ ಸಾಕಷ್ಟು ಕುಗ್ಗಿಹೋಗಿದ್ದಾರೆ.. ಅದರಲ್ಲೂ ಕೂಡಾ ಅವರ ಸಹೋದರಿ ಸಾವನ್ನಪ್ಪಿದ ಮೇಲೆ ಅವರು ತುಂಬಾನೇ ಮಾನಸಿಕ ತೊಳಲಾಟದಲ್ಲಿದ್ದಾರೆ. ಈ ನಡುವೆ ಅವರು, ತಮಿಳಿನ ಒಬ್ಬ ರಾಜಕಾರಣಿ ವಿರುದ್ಧ ಆರೋಪ ಮಾಡಿದ್ದರು.. ಇದೀಗ ವಿಜಯಲಕ್ಷ್ಮೀ ಅವರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ನಾನು ಸಾಯುತ್ತಿದ್ದೇನೆ, ನನ್ನ ಸಾವಿಗೆ ಅವನೇ ಕಾರಣ ಎಂದು ಹೇಳಿಕೊಂಡಿದ್ದಾರೆ..

ಇದನ್ನೂ ಓದಿ; Jayasudha; ಆ ಸ್ಟಾರ್‌ ಕ್ರಿಕೆಟರ್‌ ಮೇಲೆ ಕ್ರಷ್‌ ಇತ್ತು; ಹಿರಿಯ ನಟಿ ಜಯಸುಧಾ

ನನ್ನ ಸಾವಿಗೆ ಅವನೇ ಕಾರಣ ಎಂದು ನಟಿ ವಿಜಯಲಕ್ಷ್ಮೀ;

ನನ್ನ ಸಾವಿಗೆ ಅವನೇ ಕಾರಣ ಎಂದು ನಟಿ ವಿಜಯಲಕ್ಷ್ಮೀ; ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿ ಹೆಸರು ಮಾಡಿದ್ದ ನಟಿ ವಿಜಯಲಕ್ಷ್ಮೀ ನಂತರ ತೆಲುಗು ಹಾಗೂ ತಮಿಳಿನಲ್ಲಿ ಹಲವಾರು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಅಲ್ಲೂ ಕೂಡಾ ಸ್ಟಾರ್‌ ನಟಿ ಎನಿಸಿಕೊಂಡಿದ್ದರು.. ಆದ್ರೆ ಕೆಲ ವರ್ಷಗಳಿಂದ ಅವರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಅಲ್ಲದೆ ವೈಯಕ್ತಿಕ ಸೇರಿ ಬೇರೆಬೇರೆ ಕಾರಣಗಳಿಂದ ಅವರು ಮಾನಸಿಕ ಒತ್ತಡದಲ್ಲಿ ಸಿಲುಕಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ವಿರುದ್ಧ ಅವರು ಮಾತನಾಡುತ್ತಾ, ವಿಡಿಯೋಗಳನ್ನು ಹಾಕುತ್ತಿದ್ದರು. ಇದೀಗ ಅವರು ಮಾಡಿರುವ ವಿಡಿಯೋ, ಆತಂಕಕ್ಕೆ ಕಾರಣವಾಗಿದೆ. ಅದರಲ್ಲಿ ನಾನು ಸಾಯುತ್ತಿದ್ದೇವೆ. ನನ್ನ ಸಾವಿಗೆ ಅವನೇ ಕಾರಣ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಈ ವಿಡಿಯೋ ಹಾಕಲಾಗಿದ್ದು, ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ; ನದಿಯಾಳದಲ್ಲಿ ಓಡಲಿದೆ ಮೆಟ್ರೋ ರೈಲು; ಪ್ರಧಾನಿ ಮೋದಿ ಉದ್ಘಾಟನೆ!

ಸ್ಟಾರ್‌ ನಟರ ಜೊತೆ ನಟನೆ ಮಾಡಿದ್ದ ವಿಜಯಲಕ್ಷ್ಮೀ;

ಸ್ಟಾರ್‌ ನಟರ ಜೊತೆ ನಟನೆ ಮಾಡಿದ್ದ ವಿಜಯಲಕ್ಷ್ಮೀ; ನಟಿ ವಿಜಯಲಕ್ಷ್ಮೀಯವರು ಕರ್ನಾಟಕದವರಾಗಿದ್ದರೂ ಅವರು ತಮಿಳುನಾಡಿನಲ್ಲಿ ಸೆಟ್ಲ್‌ ಆಗಿದ್ದರು. ಅರ್ಜುನ್ , ಜಗಪತಿ ಬಾಬು ಮತ್ತು ವೇಣು ಕಾಂಬಿನೇಷನ್‌ನಲ್ಲಿ ಹನುಮಾನ್ ಜಂಕ್ಷನ್ ಚಿತ್ರದಲ್ಲಿ ವಿಜಯಲಕ್ಷ್ಮಿ ನಟಿಸಿದ್ದರು. ಆ ಸಿನಿಮಾದಲ್ಲಿ ಅರ್ಜುನ್, ಜಗಪತಿ ಬಾಬು ಅವರ ತಂಗಿಯಾಗಿ ಕಾಣಿಸಿಕೊಂಡಿದ್ದರು. ಆದ್ರೆ ಅವರು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದು, ಈ ವಿಡಿಯೋದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ.

ಆ ವಿಡಿಯೋದಲ್ಲಿ ಹೇಳಿರೋದೇನು..?;

ಆ ವಿಡಿಯೋದಲ್ಲಿ ಹೇಳಿರೋದೇನು..?; ಮಾಧ್ಯಮ ಮಿತ್ರರಿಗೆ ನನ್ನ ನಮಸ್ಕಾರಗಳು.. ಫೆಬ್ರವರಿ 29 ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಾಕಿದ್ದೆ. ಆ ವೀಡಿಯೋದಲ್ಲಿ ನಾಮ್ ತಮಿಳರ್ ಕಚ್ಚಿ ಸಂಯೋಜಕ ಸೀಮಾನ್ ಅವರನ್ನು ಮಾತನಾಡಿಸಿ ನನ್ನೊಂದಿಗೆ ಬಾಳುವಂತೆ ಕೇಳಿಕೊಂಡೆ.. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ  ನಾನು ತುಂಬಾ ದುಃಖಿತಳಾಗಿದ್ದೇನೆ. ನಾನು ಆತನಿಗೆ ಅಳುತ್ತಿರುವ ವೀಡಿಯೊವನ್ನು ಕೂಡಾ ಕಳುಹಿಸಿದ್ದೆ. ನನಗೆ ನೀನು ಬೇಕು, ನೀನು ಇಲ್ಲದೆ ನಾನು ಸಾಯುತ್ತೇನೆ ಎಂದು ಹೇಳಿದ್ದೆ. ಆದರೂ ಕೂಡಾ ಆತ ನನ್ನನ್ನು ಲೆಕ್ಕ ಮಾಡಿಲ್ಲ. ನನ್ನನ್ನು ಮದುವೆಯಾಗಿ ಅದನ್ನು ಆತ ಗುಟ್ಟಾಗಿ ಇಟ್ಟ.. ನನ್ನ ಜೀವನ ಹಾಳು ಮಾಡಿದ. ಈಗ ಬೇಡ ಎಂದು ರಸ್ತೆಗೆ ಎಸೆದಿದ್ದಾನೆ. ಯಾರೂ ನನಗೆ ಸಹಾಯ ಮಾಡುತ್ತಿಲ್ಲ ಅಥವಾ ಕನಿಷ್ಠ ಕಾಳಜಿ ವಹಿಸುತ್ತಿಲ್ಲ. ಈಗ ನಾನು ಕರ್ನಾಟಕದಲ್ಲಿ ಬದುಕಲು ಸಾಧ್ಯವಿಲ್ಲ. ಈಗ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.. ಇದು ನನ್ನ ಕೊನೆಯ ವಿಡಿಯೋ.. ನನ್ನ ಸಾವಿನ ಬಗ್ಗೆ ಸೀಮನ್ ವಿವರಣೆ ನೀಡಬೇಕು ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಆದ್ರೆ ಈ ವಿಡಿಯೋ ಯಾವಗ ರೆಕಾರ್ಡ್‌ ಮಾಡಿದ್ದು, ಎಲ್ಲಿ ರೆಕಾರ್ಡ್‌ ಮಾಡಿದ್ದು ಅನ್ನೋದು ಗೊತ್ತಾಗಿಲ್ಲ. ಈ ಹಿಂದೆ ಕೂಡಾ ವಿಜಯಲಕ್ಷ್ಮೀ ಅವರು ಇಂತಹ ಹಲವು ವಿಡಿಯೋಗಳನ್ನು ಮಾಡಿದ್ದರು.

ಇದನ್ನೂ ಓದಿ; ಉಗ್ರ ಚಟುವಟಿಕೆಗೆ ಸಂಚು; ಮೂವರನ್ನು ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು!

Share Post