CinemaCrime

ತಮಿಳು ನಟ ವಿಜಯ್‌ ಸೇತುಪತಿ ವಿರುದ್ಧ 3 ಕೋಟಿ ರೂ. ಮಾನನಷ್ಟ ಕೇಸ್‌..!

ಚೆನ್ನೈ: ತಮಿಳು ನಟ ವಿಜತ್‌ ಸೇತುಪತಿ ವಿರುದ್ಧ ಮಹಾ ಗಾಂಧಿ ಎಂಬ ಮತ್ತೊಬ್ಬ ನಟ ಸೈದಾಪೇಟ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 3 ಕೋಟಿ ರೂಪಾಯಿ ಮಾನನಷ್ಟ ಕಟ್ಟಿಕೊಡಬೇಕೆಂದು ದೂರು ದಾಖಲಿಸಿದ್ದಾರೆ.

ನವೆಂಬರ್‌ 2 ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಜಯ್‌ ಸೇತುಪತಿ ಸಹಚರರ ಮಾಡಿದ ದಾಳಿಯಲ್ಲಿ ನನ್ನ ಕಿವಿ ಪೂರ್ತಿಯಾಗಿ ಕೇಳಿಸುತ್ತಿಲ್ಲ. ಶಾಶ್ವತ ಕಿವುಡುತನ ಬಂದಿದೆ. ಇದರಿಂದಾಗಿ ನನ್ನ ಪ್ರತಿಷ್ಠೆಗೆ ದಕ್ಕೆಯಾಗಿದೆ ಎಂದು ಮಹಾ ಗಾಂಧಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

 ಅಷ್ಟಕ್ಕೂ ಅಂದು ಏನು ನಡೀತು..?

ನವೆಂಬರ್‌ 2ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಟ ವಿಜಯ್‌ ಸೇತುಪತಿ ಹಾಗೂ ಮತ್ತೊಬ್ಬ ನಟ ಮಹಾ ಗಾಂಧಿ ನಡುವೆ ಜಗಳ ನಡೆದಿತ್ತು. ಆ ದಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿಜಯ್‌ ಸೇತುಪತಿ ಜೊತೆ ಮಾತನಾಡುವುದಕ್ಕೆ ಮಹಾ ಗಾಂಧಿ ಬಂದಿದ್ದರು. ಈ ವೇಳೆ ಮಹಾ ಗಾಂಧಿ, ವಿಜಯ್‌ ಸೇತುಪತಿ ಮೇಲೆ ದಾಳಿ ಮಾಡಿದ್ದರು ಎಂದು ವರದಿಯಾಗಿತ್ತು. ಮಹಾ ಗಾಂಧಿ ಕುಡಿದ ಮತ್ತಿನಲ್ಲಿ ವಿಜಯ್‌ ಸೇತುಪತಿ ಮೇಲೆ ದಾಳಿ ಮಾಡಿದ್ದರು ಎಂದು ಹೇಳಲಾಗಿತ್ತು.

 ಆದರೆ ವಿಜಯ್‌ ಸೇತುಪತಿ ಮೇಲೆ ದಾಳಿ ಮಾಡಲಿಲ್ಲ ಎಂದು, ಅವರ ಮ್ಯಾನೇಜರ್‌ ಜಾನ್ಸನ್‌ ಮೇಲೆ ದಾಳಿ ಮಾಡಿದ್ದಾರೆಂದು ಪೊಲೀಸರು ಹೇಳಿದ್ದರು. ಆದರೂ, ಎರಡೂ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ನಂತರ ರಾಜೀ ಸಂಧಾನ ನಡೆದಿದ್ದರಿಂದ ಯಾವುದೇ ಕೇಸ್‌ ದಾಖಲಾಗಿರಲಿಲ್ಲ.

  ಆದರೆ ಈಗ ಮಹಾ ಗಾಂಧಿ ಕೋರ್ಟ್‌ನಲ್ಲಿ ದಾವೆ ಹೂಡಿದಿದ್ದಾರೆ. 3 ಕೋಟಿ ರೂಪಾಯಿ ನೀಡಬೇಕೆಂದು ಕೋರಿದ್ದಾರೆ.

Share Post