Cinema

ಮತ್ತೊಂದು ಸಿನಿಮಾಗೆ ಜೊತೆಯಾದ ಕಿಚ್ಚ ಸುದೀಪ್‌, ಅನೂಪ್‌ ಭಂಡಾರಿ

ಬೆಂಗಳೂರು : ಕಿಚ್ಚ ಸುದೀಪ್‌ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್‌ ರೋಣ ಕೆಲಸವನ್ನೆಲ್ಲಾ ಮುಗಿಸಿ ರಿಲೀಸ್‌ ಭಾಗ್ಯಕ್ಕಾಗಿ ಕಾದಿದೆ. ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಇಷ್ಟೊತ್ತಿಗಾಗಲೇ ತೆರೆ ಕಾಣಬೇಕಿತ್ತು ಆದರೆ ಕೋವಿಡ್‌ ಕಾರಣದಿಂದ ಮುಂದೂಡಲಾಗಿತ್ತು.

ಸಿನಿಮಾ ಇನ್ನು ಬಿಡುಗಡೆ ಆಗುವ ಮುನ್ನವೇ ಕಿಚ್ಚ ಸುದೀಪ್‌ ಮತ್ತೊಂದು ಗುಡ್‌ ನ್ಯೂಸ್‌ ಒಂದನ್ನು ನೀಡಿದ್ದಾರೆ. ಇಂದು ಬೆಳಗ್ಗೆ ಟ್ವೀಟ್‌ ಮಾಡಿರುವ ಕಿಚ್ಚ ಸುದೀಪ್‌ ವಿಕ್ರಾಂತ್‌ ರೋಣ ಸಿನಿಮಾದ 3D ಅದ್ಭುತವಾಗಿ ಮೂಡಿ ಬಂದಿದೆ. ಇಡೀ ತಂಡಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಅವರು ಅನೂಪ್‌ ಭಂಡಾರಿ ಮತ್ತು ಸುಪ್ರಿಯಾನ್ವಿ ಪಿಚ್ಚರ್‌ ಸ್ಟುಡಿಯೋದವರೊಂದಿಗೆ ನನ್ನ ಮುಂದಿನ ಪ್ರಾಜೆಕ್ಟ್‌ ಅನ್ನು ಘೋಷಿಸಲು ಕಾತುರನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಈಗಾಗಲೇ ಎರಡೆರಡು ಬಾರಿ ವಿಕ್ರಾಂತ್‌ ರೋಣ ಸಿನಿಮಾ ರಿಲೀಸ್‌ ಡೇಟ್‌ ಅನ್ನು ಮುಂದಕ್ಕೆ ಹಾಕಿರುವ ಚಿತ್ರತಂಡ ಸದ್ಯದಲ್ಲಿಯೇ ತನ್ನ ರಿಲೀಸ್‌ ಡೇಟ್‌ ಅನ್ನು ಅನೌನ್ಸ್‌ ಮಾಡಿಕೊಂಡು ಅದ್ಧೂರಿಯಾಗಿ ಬರಲಿದೆ ಎಂದು ನಿರ್ಮಾಪಕ ಜಾಕ್‌ ಮಂಜು ಹೇಳಿದ್ದಾರೆ.

 

Share Post