Bengaluru

ಕಾಂಗ್ರೆಸ್‌ನವರ ಧರಣಿ ಜನಹಿತದಿಂದ ಕೂಡಿಲ್ಲ: ಕಾಂಗ್ರೆಸ್‌ ತಿರಸ್ಕಾರ ಆಗೋದು ಗ್ಯಾರೆಂಟಿ-ಸಿಎಂ

ವಿಧಾನಸಭೆ: ಕಲಾಪದಲ್ಲಿ ಕಾಂಗ್ರೆಸ್‌ ನಾಯಕರ ಪ್ರತಿಭಟನೆ ಸಲುವಾಗಿ ಸಿಎಂ ಬಸವರಾಜ್‌ ಬೊಮ್ಮಯಿಯವರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ನವರು ಮಾಡುತ್ತಿರುವ ಧರಣಿಯಲ್ಲಿ ವಿಚಾರ ಇಲ್ಲ. ವಿಧಾನಸಭೆಯಲ್ಲಿ ಎಷ್ಟೊಂದು ಧರಣಿ ನಡೆದಿವೆ ಆದರೆ ಇಂತಹ ಅರ್ಥವಿಲ್ಲದ ಪ್ರತಿಭಟನೆ ಮಾಡ್ತಿರುವುದು ಇದೇ ಮೊದಲು. ಇವರ ರಾಜಕೀಯ ದಿವಾಲಿತನವಾಗಿದೆ. ಜನಹಿತಕ್ಕಾಗಿ, ಜನರಿಗಾಗಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿದೆ. ಆದ್ರೆ ಇವರು ರಾಜಕೀಯಕ್ಕಾಗಿ, ರಾಜಕೀಯಕ್ಕೋಸ್ಕರ ಪ್ರತಿಭಟನೆ ಮಾಡುತ್ತಿದ್ದಾರೆ. ಇವರ ಈ ಧೋರಣೆ ಇತರರ ಹಕ್ಕನ್ನು ಮೊಟಕುಗೊಳಿಸುವಂತೆ ಇದೆ ಎಂದು ಆರೋಪ ಮಾಡಿದ್ರು.

ರಾಜ್ಯದಲ್ಲಿ ತಲೆದೋರಿರುವ ವಿವಾದವನ್ನು ಬಗೆಹರಿಸುವ ಬದು ಅವರ ಮನದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ಅಂತಹ ವಿಚಾರಗಳಿಗೆ ವಿಧಾನಸೌಧದಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಚರ್ಚೆ ಮಾಡಿ ಮಕ್ಕಳಿಗೆ, ಪೋಷಕರಿಗೆ ಸಂದೇಶ ರವಾನಿಸಬೇಕಾಗಿದೆ. ಆದರೆ ಇವರ ಈ ನಡವಳಿಕೆ ಇಡೀ ಸಂಸದೀಯ, ಸಂವಿಧಾನಕ್ಕೆ ಧಕ್ಕೆ ತಂದಿದ್ದಾರೆ. ರಾಜ್ಯದ ಮಕ್ಕಳಿಗೆ, ಜನಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಕಾಂಗ್ರೆಸ್‌ ರಾಜದ್ರೋಹದ ನಡವಳಿಕೆ ತೋರುತ್ತಿದೆ.

ಇಂದು ಇವರು ಜನ ರ ಭಾವನೆಗೆ ಸ್ಪಂದನೆ ಮಾಡದಿದ್ದರೆ. ಮತದಾರ ಪ್ರಭುಗಳು ಇವರನ್ನು ತಿರಸ್ಕಾರ ಮಾಡುತ್ತಾರೆ. ಇಡೀ ದೇಶದಲ್ಲಿ ತಿರಸ್ಕಾರ ಮಾಡಿದ್ದಾರೆ. ಇವರ ವರ್ತನೆ ಹೀಗೆ ಮುಂದುವರೆದರೆ ನಾಳೆ ಇಲ್ಲಿಯೂ ಇವರನ್ನು ಜನ ಬಹಿಷ್ಕಾರ ಮಾಡುತ್ತಾರೆ. ಇಂದು ನೀವೂ ಕೂಡ ಕಾಂಗ್ರೆಸ್‌ ಧೋರಣೆಯನ್ನು ತಿರಸ್ಕಾರ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸಭಾಪತಿಯವರಿಗೆ ಮನವಿ ಮಾಡಿದ್ದಾರೆ.

Share Post