Cinema

ಡಾನ್‌ ನೀವು ಶಿವಣ್ಣ ನಾನಲ್ಲ – ರಾಜ್‌ ಶೆಟ್ಟಿ

ನಟ ಶಿವರಾಜ್‌ ಕುಮಾರ್‌ ಅವರು ನಟ, ನಿರ್ದೇಶಕ ರಾಜ್‌ ಶೆಟ್ಟಿ ಅವರಿಗೆ ಕಾಲ್‌ ಮಾಡಿ ಕಾಲೆಳೆದಿದ್ದಾರೆ. ನೀನು ಮಂಗಳಾದೇವಿ ಡಾನಾ ಎಂದು ಶಿವಣ್ಣ ರಾಜ್‌ ಶೆಟ್ಟಿ ಅವರಿಗೆ ಕೇಳಿದ್ದಾರೆ. ರಾಜ್‌ ಬಿ ಶೆಟ್ಟಿ ಅವರ ಗರುಡ ಗಮನ ವೃಷಭ ವಾಹನ ಸಿನಿಮಾ ಇದೇ ಜನವರಿ 13ರಿಂದ ಜೀ5 ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿದೆ.

ಶಿವಣ್ಣನವರ ಭಜರಂಗಿ ೨ ಸಿನಿಮಾ ಕೂಡ ಜೀ‌5 ಓಟಿಟಿ ಪ್ಲಾಟ್‌ಫಾರ್ಮ್ ಅವರೇ ಖರೀದಿ ಮಾಡಿದ್ದರು. ಇದರಿಂದ ಶಿವಣ್ಣ ರಾಜ್‌ ಶೆಟ್ಟಿ ಅವರಿಗೆ ಕಾಲ್‌ ಮಾಡಿ ಶುಭ ಹಾರೈಸುವ ಸಮಯದಲ್ಲಿ ಕಾಲೆಳೆದಿದ್ದಾರೆ.

ಇಬ್ಬರ ನಡುವಿನ ಸಂಭಾಷಣೆ ಹೀಗಿತ್ತು

ಶಿವಣ್ಣ : ಹಲೋ,  ಮಂಗಳಾದೇವಿಗೆ ನೀನೇನ್‌ ದೊಡ್ಡ ಡಾನಾ ?

ರಾಜ್‌ ಶೆಟ್ಟಿ : ಯಾರ್‌ ಯಾರ್ ನೀವ್ಯಾರು ? ‌

ಶಿವಣ್ಣ : ಬರ್ಬೇಕಾ ಅಲ್ಲೇ ? ಬನ್ನಿ ಅಂದ್ರೆ ಬರ್ತೀನಿ

ರಾಜ್‌ ಶೆಟ್ಟಿ : ಬನ್ನಿ ಬನ್ನಿ, ಇಲ್ಲೆ ಮೀನ್‌ ಊಟ ಮಾಡೋಣ

ಶಿವಣ್ಣ : ನೀನೇನ್‌ ದೊಡ್ಡ ಡಾನಾ ಅಲ್ಲಿ ?

ರಾಜ್‌ ಶೆಟ್ಟಿ : ಅಲ್ಲ ಡಾನ್‌ ಅಲ್ಲ, ನೀವ್ಯಾರು ಹೇಳಿ

ಶಿವಣ್ಣ : ಭಜರಂಗಿ

ರಾಜ್‌ ಶೆಟ್ಟಿ : ಹೋ ಶಿವಣ್ಣ, ನೀವು ಡಾನ್‌ ಶಿವಣ್ಣ ನಾನಲ್ಲ

ನಂತರದ ಸಂಭಾಷಣೆಯಲ್ಲಿ ಸಿನಿಮಾಗೆ ಶಿವಣ್ಣ ವಿಶ್‌ ಮಾಡಿದ್ದಾರೆ.

ಇನ್ನು ಭಜರಂಗಿ ಸಿನಿಮಾ ಮೂರೂ ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ.

Share Post