Cinema

ಪ್ಯಾನ್‌ ಇಂಡಿಯಾ ಸ್ಟಾರ್‌ಗಾಗಿ ಸ್ಪೆಷಲ್ ಸ್ಕ್ರೀನ್‌ನಲ್ಲಿ RRR: ಪ್ರಭಾಸ್‌ ರಿವ್ಯೂಗಾಗಿ ಕಾಯ್ತಿದಾರಂತೆ ರಾಜಮೌಳಿ

ಹೈದರಾಬಾದ್:‌ ಜಗತ್ತನ್ನೇ ನಿಬ್ಬೆರಗಾಗಿಸುತ್ತಿರುವ ‘ಆರ್‌ಆರ್‌ಆರ್’ ಬಗ್ಗೆ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಪ್ರೇಕ್ಷಕರು ಕೂಡ ಚಿತ್ರ ವೀಕ್ಷಿಸಲು ಥಿಯೇಟರ್‌ಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಈ ಸಿನಿಮಾ ಸಂಪೂರ್ಣ ಪಾಸಿಟಿವ್ ಟಾಕ್ ಪಡೆಯುತ್ತಿರುವುದರಿಂದ ಈ ಸಿನಿಮಾ ನೋಡದವರು ಆದಷ್ಟು ಬೇಗ ನೋಡಬೇಕಂತೆ. ಈಗಾಗಲೇ ನೋಡಿದವರು ಈ ಸಿನಿಮಾವನ್ನು ಮತ್ತೆ ಮತ್ತೆ ನೋಡಬೇಕು ಎನ್ನವಂತಿದೆ ವಿಮರ್ಶೆ.

ಈಗಾಗಲೇ ಸ್ಟಾರ್‌ ನಟರೆಲ್ಲ ಈ  ಚಿತ್ರವನ್ನು ನೋಡಿ ತಮ್ಮ ಪ್ರತಿಕ್ರಿಯೆಯನ್ನು ಹೇಳಿದ್ದಾರೆ. ಆದರೆ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಗಾಗಿ, ಪ್ಯಾನ್ ಇಂಡಿಯಾ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲು ಚಿತ್ರತಂಡ ಸಿದ್ಧವಾಗಿದೆಯಂತೆ. ಚಿಕಿತ್ಸೆಗಾಗಿ ಸ್ಪೇನ್‌ಗೆ ತೆರಳಿರುವ ಪ್ರಭಾಸ್ ಈ ವಾರಾಂತ್ಯದಲ್ಲಿ ಹೈದರಾಬಾದ್‌ಗೆ ಮರಳಲಿದ್ದಾರೆ. ನಿರ್ದೇಶಕ ರಾಜಮೌಳಿ ಮತ್ತು ತಂಡ ʻಆರ್‌ಆರ್‌ಆರ್ʼ ಚಿತ್ರವನ್ನು ಪ್ರಭಾಸ್‌ಗಾಗಿ  ವಿಶೇಷವಾಗಿ ಪ್ರದರ್ಶಿಸಲು ಪ್ಲಾನ್‌ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸೋಮವಾರ ಸ್ಪೆಷಲ್ ಸ್ಕ್ರೀನಿಂಗ್ ನಡೆಯಲಿದ್ದು, ಈ  ಸಿನಿಮಾ ನೋಡಿದ ಬಳಿಕ ಪ್ರಭಾಸ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲಿದ್ದಾರಂತೆ. ಜಕ್ಕಣ್ಣ ಈ ಅದ್ಬುತ ಸಿನಿಮಾ ಬಗ್ಗೆ ಡಾರ್ಲಿಂಗ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದಾರೆ. ಅಲ್ಲೂರಿ ಸೀತಾರಾಮರಾಜನ ಪಾತ್ರದಲ್ಲಿ ಚರಣ್ ಮತ್ತು ಕೊಮುರಂ ಭೀಮನ ಪಾತ್ರದಲ್ಲಿ ತಾರಕ್ ತಮ್ಮ ಪವರ್ ಪ್ಯಾಕ್ಡ್ ಅಭಿನಯಕ್ಕೆ ಜನ ಸಿಳ್ಳೆ ಹೊಡೆಯುತ್ತಿದ್ದಾರೆ. ಆದಾಯದ ವಿಚಾರದಲ್ಲಿ ಈ ಚಿತ್ರ ಬಾಹುಬಲಿ ದಾಖಲೆಗಳನ್ನು ಮುರಿಯುತ್ತಿದೆ.

Share Post