Cinema

ಸ್ಯಾಮ್‌ ಜೊತೆ ವಿಚ್ಛೇದನದ ಬಳಿಕ ಮೌನ ಮುರಿದ ಚೈತು

ಹೈದರಾಬಾದ್:‌ ಟಾಲಿವುಡ್‌ನ ಹೆಸರಾಂತ ನಾಯಕ ಅಕ್ಕಿನೇನಿ ನಾಗಾರ್ಜುನ ಮಗ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಟಾಲಿವುಡ್‌ನ ಸೂಪರ್‌ ಜೋಡಿ ಅಂತಾನೆ ಹೆಸರುವಾಸಿಯಾಗಿದ್ದ ಇವರ ಮೇಲೆ ಯಾರ ವಕ್ರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಮದುವೆಯಾದ  ನಾಲ್ಕು ವರ್ಷಗಳ ಬಳಿಕ ತಮ್ಮ ದಾಂಪತ್ಯ ಜೀವನಕ್ಕೆ ತೆರೆ ಎಳೆದಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳ ಮನಸ್ಸಿಗೆ ಆಘಾತವಾಗಿದ್ರೂ ಸತ್ಯವನ್ನು ಅರಗಿಸಿಕೊಳ್ಳಲೇಬೇಕು.

ವಿಚ್ಛೇದನದ ಬಳಿಕ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಆಕ್ಟೀವ್‌ ಆಗಿದ್ರು. ಆಗಿಂದಾಗ್ಗೆ ತಮ್ಮ ಜೀವನದ ವಿಚಾರಗಳನ್ನು ಮತ್ತು ಮೋಟಿವೇಷನಲ್‌ ಮಾತುಗಳನ್ನು ಪೋಸ್ಟ್‌ ಮಾಡ್ತಿದ್ರು. ಪುಷ್ಟ ಸಿನಿಮಾದ ಐಟಂ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ರು. ಆದ್ರೆ ನಾಗಚೈತನ್ಯ ಮಾತ್ರ ತಮ್ಮ ವಿಚ್ಛೇದನದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.

ಮೊಟ್ಟ ಮೊದಲ ಬಾರಿಗೆ ಬಂಗಾರ್ರಾಜು ಸಿನಿಮಾ ಪ್ರೊಮೋಷನ್‌ ಕಾರ್ಯಕ್ರಮದಲ್ಲಿ ವಿಚ್ಚೇದನದ ಬಗ್ಗೆ ಮಾತನಾಡಿದ್ದಾರೆ. ಇದು ಇಬ್ಬರೂ ಸೇರಿ ತೆಗೆದುಕೊಂಡ ನಿರ್ಣಯ. ಈ ಪರಿಸ್ಥಿತಿಗೆ ನಾವು ತೆಗೆದುಕೊಂಡ ತೀರ್ಮಾನ ಸರಿಯಾಗಿಯೇ ಇದೆ. ವಿಚ್ಛೇದನದ ಬಳಿಕ ಅವರೂ ಆನಂದವಾಗಿದ್ದಾರೆ. ನಾನೂ ಕೂಡ ಸಂತೋಷವಾಗಿದ್ದೇನೆ ಎಂದು ಹೇಳಿರುವ ವಿಡಿಯೋ ವೈರಲ್‌ ಆಗಿದೆ.

Share Post