Cinema

ಉಪ್ಪೆನ ಬೆಡಗಿಗೆ ಖುಲಾಯಿಸಿದ ಅದೃಷ್ಟ: ಪ್ರಿನ್ಸ್‌ಗೆ ನಾಯಕಿಯಾಗಿ ಕೃತಿ ಶೆಟ್ಟಿ..?

ಹೈದರಾಬಾದ್:‌ ಎಲ್ಲಾ ಸ್ಟಾರ್ ಹೀರೋಗಳು ಕರೋನಾ ಸಮಯದಲ್ಲಿ ಉಂಟಾದ ಗ್ಯಾಪ್‌ ಸರಿಮಾಡಲು ಸರಣಿ ಚಲನಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರಲ್ಲಿ ಮಹೇಶ್ ಬಾಬು ಕೂಡ ಇದ್ದಾರೆ. ಕಳೆದ ವರ್ಷವೇ ಬಿಡುಗಡೆ ಮಾಡಬೇಕಿದ್ದ ಸರ್ಕಾರು ವಾರಿ ಪಾಟ ಸಿನಿಮಾ ಈ ಬೇಸಿಗೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಮಹೇಶ್ ಬಾಬು ತಮ್ಮ 28 ನೇ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಮಾಡಲಿದ್ದಾರೆ ಎಂದು ಈಗಾಗಲೇ ತಿಳಿದುಬಂದಿದೆ. ಮತ್ತೊಮ್ಮೆ ಮಹೇಶ್‌ಗೆ ನಾಯಕಿಯಾಗಿ ಪೂಜಾ ಹೆಗಡೆ ನಟಿಸಲಿದ್ದಾರೆ.

ಹರಿಕಾ ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿನ್ನಬಾಬು ನಿರ್ಮಿಸುತ್ತಿರುವ ಈ ಚಿತ್ರ ಶೀಘ್ರದಲ್ಲೇ ರೆಗ್ಯುಲರ್ ಶೂಟಿಂಗ್‌ಗೆ ನಡೆಯಲಿದೆ. ಇನ್ನೂ ಈ ಸಿನಿಮಾದಲ್ಲಿ ಮತ್ತೊಬ್ಬ ನಾಯಕಿಯಾಗಿ ಇನ್ನೊಬ್ಬ ನಾಯಕಿಯ ಹೆಸರು ಥಳಕು ಹಾಕಿಕೊಂಡಿದೆ. ಮೋಹನ್ ಲಾಲ್, ಶೋಭನಾ, ತ್ರಿಷಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಉಪ್ಪೆನ  ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ನಾಯಕಿಯಾಗಿ ಹೆಸರು ಮಾಡಿದ್ದ ಕೃತಿ ಶೆಟ್ಟಿಗೆ ಈಗ ಟಾಲಿವುಡ್ ನಲ್ಲಿ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಬಂಗಾರರಾಜು ಜೊತೆ ಈಗಾಗಲೇ ನಟಿಸಿರುವ ಕೃತಿ, ರಾಮ್ ದಿ ವಾರಿಯರ್, ಸುಧೀರ್ ಬಾಬು ಆ ಅಮ್ಮಾಯಿ ಗುರುಂಚಿ ಚೆಪ್ಪಾಲಿ,  ನಿತಿನ್ ಮಾಚರ್ಲಾ ನಿಯೋಜಕ ವರ್ಗಂ ಹ್ಯಾಟ್ರಿಕ್ ಚಿತ್ರಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದೀಗ ಮಹೇಶ್-ತ್ರಿವಿಕ್ರಮ್ ಸಿನಿಮಾದಲ್ಲೂ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂಬ ಮಾತು ಶುರುವಾಗಿದೆ. ಇದು ಎರಡನೇ ನಾಯಕಿಯೋ ಅಥವಾ ಮುಖ್ಯ ಪಾತ್ರವೋ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಮಹೇಶ್ ಸಿನಿಮಾದಲ್ಲಿ ಕೃತಿ ನಟನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಸಿನಿಮಾ ಶುರು ಆದರೆ ಮಾತ್ರ ಇದರ ಅಸಲಿ ಸತ್ಯ ಬಹಿರಂಗವಾಗಲಿದೆ.

Share Post