CinemaLifestyle

ದಕ್ಷಿಣ ಕನ್ನಡದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಕತ್ರಿನಾ ಕೈಫ್‌ ಭೇಟಿ

ಮಂಗಳೂರು; ಬಾಲಿವುಡ್‌ ನಟ ಕತ್ರಿನಾ ಕೈಫ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.. ನಟ ಸುನಿಲ್‌ ಶೆಟ್ಟಿ ಕುಟುಂಬದ ಜೊತೆ ಆಗಮಿಸಿದ್ದ ಕತ್ರಿನಾ ಕೈಫ್‌ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ..

ಸುನಿಲ್‌ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ, ಪುತ್ರಿ ಅತಿಯಾ ಶೆಟ್ಟಿ ಹಾಗೂ ಅಳಿಯ ಕೆ.ಎಲ್‌.ರಾಹುಲ್‌ ಕೂಡಾ ಕತ್ರಿನಾ ಕೈಫ್‌ ಜೊತೆ ಹಾಜರಿದ್ದರು.. ಕತ್ರಿನಾ ಕೈಫ್‌ ಅವರು ಮುಸ್ಲಿಂ ಆಗಿದ್ದು, ಹಿಂದೂ ವಿಕ್ಕಿ ಕೌಶಲ್‌ ಅವರನ್ನು ವಿವಾಹವಾಗಿದ್ದಾರೆ.. ಹೀಗಾಗಿ ಎರಡೂ ಧರ್ಮದ ಆಚರಣೆಗಳನ್ನು ಅವರು ಪಾಲಿಸುತ್ತಾರೆ..

ಕೊರಗಜ್ಜನನ್ನು ಬಾಲಿವುಡ್‌ನಲ್ಲಿ ನೆಲೆ ನಿಂತಿರುವ ಕರಾವಳಿಯ ಪ್ರಮುಖ ನಟಿ ನಟಿಯರೆಲ್ಲಾ ಪೂಜಿಸುತ್ತಾರೆ.. ಕಾರವಳಿಯ ಜನರನ್ನು ಆರಾಧಿಸುವ ಕೊರಜ್ಜನ ಸೇವೆ ಮಾಡಲು ದೇಶ ವಿದೇಶಗಳಿಂದಗೂ ಜನ ಬರುತ್ತಾರೆ.. ಕೊರಗಜ್ಜನ ಮಹಿಮೆ ಬಗ್ಗೆ ತಿಳಿದ ಕತ್ರಿನಾ ಕೈಫ್‌ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ..

 

Share Post