Cinema

ಸಂಕ್ರಾಂತಿಗೆ ಓಟಿಟಿಯಲ್ಲಿ ಗರುಡ ಗಮನ ವೃಷಭ ವಾಹನ

ಬೆಂಗಳೂರು : ರಾಜ್‌ ಶೆಟ್ಟಿ ಮತ್ತು ರಿಷಭ್‌ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ  ಚಿತ್ರವು ಸಂಕ್ರಾಂತಿಗೆ ಓಟಿಟಿಯಲ್ಲಿ ತೆರೆ ಕಾಣಲಿದೆ. ಜೀ೫ ಓಟಿಟಿಯಲ್ಲಿ ಈ ಸಿನಿಮಾ ಸಂಕ್ರಾಂತಿ ಇಂದ ಲಭ್ಯ ಇರಲಿದೆ. ಭಜರಂಗಿ ೨, ಕನ್ನಡಿಗ ಬಳಿಕ ಈ ಸಿನಿಮಾ ಜೀ೫ ಅವರ ಪಾಲಾಗಿದೆ.

ಹರಿ ಮತ್ತು ಶಿವ ಪಾತ್ರದ ಮೂಲಕ ಕರಾವಳಿಯ ರೌಡಿಸಂ ಅನ್ನು ಕಟ್ಟಿಕೊಟ್ಟಿದ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಅಮೇಜಾನ್‌ ಪ್ರೈಮ್‌ ನಂತರ ತಲೆ ಎತ್ತುತಿರುವ ಈ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಸಿನಿಮಾಗಳಿಗೆ ಒಳ್ಳೆ ಬೇಡಿಕೆ ಬರುತ್ತಿದೆ.

ಸಾಕಷ್ಟು ಸಿನಿಮಾಗಳು ನೇರವಾಗಿ ಓಟಿಟಿಯಲ್ಲೇ ತೆರೆ ಕಾಣುವ ಮಟ್ಟಕ್ಕೆ ಓಟಿಟಿ ಬೆಳೆದಿದೆ. ಸ್ಟಾರ್‌ ಸಿನಿಮಾಗಳು ಕೂಡ ಮುಂದೊಂದು ದಿನ ಇದೇ ನೀತಿ ಅನುಸರಿಸಬಹುದು.

Share Post