BengaluruCinemaCrime

ದರ್ಶನ್‌ ಭೇಟಿಯಾದ ವಿಜಯಲಕ್ಷ್ಮೀ; ಅಪ್ಪನನ್ನು ಅಪ್ಪಿಕೊಂಡು ವಿನೀಶ್‌ ಕಣ್ಣೀರು!

ಬೆಂಗಳೂರು; ಕಳೆದ ಒಂದು ತಿಂಗಳಿಂದ ಜೈಲಿನಲ್ಲಿರುವ ನಟ ದರ್ಶನ್‌ ಅವರನ್ನು ಎರಡನೇ ಬಾರಿ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.. ಈ ವೇಳೆ ಮೂವರೂ ಭಾವುಕರಾಗಿದ್ದಾರೆ.. ಅದ್ರಲ್ಲೂ ಕೂಡಾ ಅಪ್ಪನ ಪರಿಸ್ಥಿತಿ ನೋಡಿ ಮಗ ವಿನೀಶ್‌ ಕಣ್ಣೀರು ಹಾಕಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ತನ್ನ ಮಗಳಿಗಿಂತ ಚೆನ್ನಾಗಿ ಓದುತ್ತಿದ್ದಕ್ಕೆ ಶಿಕ್ಷಕಿ ಟಾರ್ಚರ್;‌ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗಿದ್ದಾರೆ.. ಈ ಹಿನ್ನೆಲೆಯಲ್ಲಿ ದರ್ಶನ್‌ ತುಂಬಾನೇ ಸೊರಗಿದ್ದಾರೆ ಎಂದು ತಿಳಿದುಬಂದಿದೆ.. ದರ್ಶನ್‌ ಹತ್ತು ಕೆಜಿ ತೂಕ ಕಡಿಮೆಯಾಗಿದ್ದು, ಇದನ್ನು ನೋಡಿದ ಮಗ ವಿನೀಶ್‌ ಕಣ್ಣೀರು ಹಾಕಿದ್ದಾರೆ.. ಅಪ್ಪನನ್ನು ವಿನೀಶ್‌ ಅಪ್ಪಿಕೊಂಡು ಅತ್ತಿದ್ದಾನೆ..

ಇದನ್ನೂ ಓದಿ; ಟಾಯ್ಲೆಟ್‌ ಸೀಟ್‌ಗಿಂತ ನೀರಿನ ಬಾಟಲಿಯಲ್ಲಿ 40 ಸಾವಿರ ಪಟ್ಟು ಹೆಚ್ಚು ಬ್ಯಾಕ್ಟೀರಿಯಾ..!

ಇನ್ನು ಪತ್ನಿ ವಿಜಯಲಕ್ಷ್ಮೀ ಅವರು ಧೈರ್ಯ ತುಂಬಿದ್ದು, ದರ್ಶನ್‌ಗೆ ಬಟ್ಟೆ ಹಾಗೂ ಹಣ್ಣುಗಳನ್ನು ನೀಡಿದರು ಎಂದು ತಿಳಿದುಬಂದಿದೆ.. ದರ್ಶನ್‌ ಮನೆ ಊಟಕ್ಕೆ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದು, ಕೋರ್ಟ್‌ ಜುಲೈ 18 ರಂದು ಈ ಬಗ್ಗೆ ಆದೇಶ ನೀಡಲಿದೆ.

Share Post