BengaluruPolitics

ಇನ್ನು ಐವತ್ತು ದಿನದಲ್ಲಿ ಬಿಜೆಪಿ ಸರ್ಕಾರ ಇರಲ್ಲ; ಡಿಕೆಶಿ ಭವಿಷ್ಯ

ಬೆಂಗಳೂರು; ಬೇಕಾದ್ರೆ ಬೋರ್ಡ್‌ ಹಾಕ್ಕೊಳಿ. ಇನ್ನು ಐವತ್ತು ದಿನದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಎರಡನೇ ಹಂತದ ಜನಧ್ವನಿ ಯಾತ್ರೆಗೆ ತೆರಳುವುದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಈ ಬಾರಿ ಪಕ್ಕಾ 136 ಸೀಟು ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ನಾವು ಬೀದರ್‌ ಹಾಗೂ ರಾಮನಗರ ಬಿಟ್ಟು ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಭೇಟಿ ನೀಡಿದ್ದೆವು. ನಮ್ಮ ಜನಧ್ವನಿ ಯಾತ್ರೆಗೆ ಭಾರಿ ಜನ ಜನಬೆಂಬಲ ಸಿಕ್ಕಿದೆ. ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಒಬ್ಬರು ಶಾಸಕರೂ ಇಲ್ಲ. ಆದ್ರೆ ಅಂತಹ ಜಿಲ್ಲೆಗಳಲ್ಲೂ ನಮ್ಮ ಯಾತ್ರೆಗೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ ಎಂದು ಡಿಕೆಶಿ ಹೇಳಿದರು.

ನಮಗೆ ನಿರೀಕ್ಷೆಗಿಂತ ಜನ ಬೆಂಬಲ ಸಿಕ್ಕಿದೆ. ಜನರು ಎಲ್ಲರೂ ಸ್ವಯಂ ಪ್ರೇರಿತರಾಗಿ ಯಾತ್ರೆಗೆ ಬಂದಿದ್ದರು. ಇದ್ರಿಂದ ನಮಗೆ ಮತ್ತಷ್ಟು ಉತ್ಸಾಹ ಬಂದಿದೆ. ಈ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗಲಿದೆ. ಮೊದಲಿಗೆ ನಾನು ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತೇನೆ. ರಾಜ್ಯಕ್ಕೆ ಎದುರಾಗಿರುವ ಸಂಕಷ್ಟ ನಿವಾರಣೆಯಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಡಿಕೆಶಿ ಹೇಳಿದರು.

Share Post