Cinema

ಸಮನ್ವಿ ಮನೆಗೆ ಡಿಕೆಶಿ ಭೇಟಿ

ಬೆಂಗಳೂರು : ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಮನ್ವಿ ಅವರ ಮನೆಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆವರು ಭೇಟಿ ಕೊಟ್ಟಿದ್ದಾರೆ. ಡಿಕೆಶಿ ಅವರು ಸಮನ್ವಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಅಮೃತಾ ರೂಪೇಶ್ ಅವರ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಮಂಗಳವಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸಮನ್ವಿ ಭಾವಚಿತ್ರಕ್ಕೆ ಡಿ ಕೆ ಶಿವಕುಮಾರ್‌ ನಮಸ್ಕರಿಸಿದರು.

ಕೋಣನಕುಂಟೆಯಲ್ಲಿ ನಡೆದ ಟಿಪ್ಪರ್‌ ಲಾರಿ ಮತ್ತು ಸ್ಕೂಟಿಯ ಅಪಘಾತದಲ್ಲಿ ಬಾಲಕಿ ಸಮನ್ವಿ ಸಾವನ್ನಪ್ಪಿದ್ದರು. ಈಗ ಸಮನ್ವಿ ತಾಯಿ ಅಮೃತ ನಾಲ್ಕು ತಿಂಗಳ ಗರ್ಭಿಣಿ. ಸಮನ್ವಿಗೂ ಮುಂಚೆ ಒಂದು ಮಗು ತೀರಿ ಹೋಗಿತ್ತು.

 

Share Post