CinemaCrime

ಅಮಿತಾಬ್‌, ಅಂಬಾನಿ ಮನೆಯಲ್ಲಿ ಬಾಂಬ್‌ ಬೆದರಿಕೆ; ತೀವ್ರ ತಪಾಸಣೆ

ಮುಂಬೈ; ಅಪರಿಚಿತ ವ್ಯಕ್ತಿಗಳ ಕರೆಯಿಂದಾಗಿ ಮುಂಬೈನಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ನಾಗಪುರದ ಪೊಲೀಸರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಗಳು, ಬಾಲಿವುಡ್ ಖ್ಯಾತ ನಟರಾದ ಅಮಿತಾಭ್ ಬಚ್ಚನ್, ಧರ್ಮೇಂದ್ರ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದರು.

ಇದರಿಂದಾಗಿ ಪೊಲೀಸರು ಮೂವರೂ ಗಣ್ಯರ ಮನೆಯಲ್ಲಿ ತೀವ್ರ ತಪಾಸಣೆ ನಡೆಸಿದರು. ಆದ್ರೆ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ. ಹೀಗಾಗಿ ಅದು ಹುಸಿ ಬಾಂಬ್‌ ಕರೆ ಎಂದು ಸಾಬೀತಾಗಿದೆ. ಕರೆ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share Post