CinemaNational

ಬಾಲಕೃಷ್ಣರ ʻವೀರ ಸಿಂಹಾರೆಡ್ಡಿʼ ಚಿತ್ರದಲ್ಲಿ ಕೆಜಿಎಫ್‌-೨ ನಟ ವಿಲನ್‌..!

ಹೈದರಾಬಾದ್‌; ಅಖಂಡ ಚಿತ್ರ ಯಶಸ್ಸಿನ ನಂತರ ತೆಲುಗಿನ ನಂದಮೂರಿ ಬಾಲಕೃಷ್ಣ ಹೊಸ ಉತ್ಸಾಹದಲ್ಲಿದ್ದಾರೆ. ಅವರ ಹೊಸ ಸಿನಿಮಾ ʻವೀರ ಸಿಂಹಾರೆಡ್ಡಿʼ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ದುನಿಯಾ ವಿಜಿ ವಿಲನ್‌ ಆಗಿ ನಟಿಸುತ್ತಿರೋದು ಎಲ್ಲಿರಿಗೂ ಗೊತ್ತಿರೋ ವಿಚಾರ. ಇದೀಗ ಮತ್ತೊಬ್ಬ ಕನ್ನಡದ ನಟ ಈ ಚಿತ್ರದಲ್ಲಿ ವಿಲನ್‌ ಆಗುತ್ತಿದ್ದಾರೆ. ಕೆಜಿಎಫ್‌-೨ನಲ್ಲಿ ಆಂಡ್ರೂಸ್‌ ಪಾತ್ರದಲ್ಲಿ ಮಿಂಚಿದ್ದ ಅವಿನಾಶ್‌ ಕೂಡಾ ಬಾಲಕೃಷ್ಣರ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ವೀರ ಸಿಂಹಾರೆಡ್ಡಿ ಚಿತ್ರದಲ್ಲಿ ಗಂಗಿರೆಡ್ಡಿ ಎಂಬ ಪಾತ್ರ ಬರುತ್ತದೆ. ಈ ಪಾತ್ರಕ್ಕಾಗಿ ಒಳ್ಳೆಯ ಖಳನಾಯಕನನ್ನು ಹುಡುಕುತ್ತಿದ್ದರು. ಇದೀಗ ಈ ಪಾತ್ರಕ್ಕೆ ಅವಿನಾಶ್‌ ಹೆಸರು ಫೈನಲ್‌ ಆಗಿದೆ. ಈ ಬಗ್ಗೆ ಮಾತುಕತೆ ಕೂಡಾ ನಡೆದಿದೆ. ಹೀಗಾಗಿಯೇ ನಿರ್ದೇಶಕ ಗೋಪಿ ಚಂದ್ ಮಲಿನೇನಿ ಜೊತೆಗಿರುವ ಅವಿನಾಶ್ ಫೋಟೋ ವೈರಲ್ ಆಗುತ್ತಿದೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಸಿನಿಮಾದಲ್ಲಿ ಬಾಲಯ್ಯ ಜತೆ ಶ್ರುತಿ ಹಾಸನ್, ದುನಿಯಾ ವಿಜಯ್, ವರಲಕ್ಷ್ಮಿ ಶರತ್‌ಕುಮಾರ್, ಅವಿನಾಶ್ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಇದೆ.

Share Post