CinemaHealth

ಮತ್ತೊಬ್ಬ ಚಿತ್ರನಿರ್ದೇಶಕನಿಗೆ ಹೃದಯಾಘಾತ; ಆರೋಗ್ಯ ಪರಿಸ್ಥಿತಿ ಗಂಭೀರ..!

ಕೇರಳ; ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿನ್ನೆಯಷ್ಟೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೀಗಿರುವಾಗಲೇ ಮತ್ತೊಬ್ಬ ಚಿತ್ರನಿರ್ದೇಶಕನಿಗೆ ಹೃದಯಾಘಾತವಾಗಿದೆ. ಮಲಯಾಳಂನ ಖ್ಯಾತ ನಿರ್ದೇಶಕ ಸಿದ್ದಿಕಿ ಅವರಿಗೆ ಹೃದಯಾಘಾತವಾಗಿದ್ದು, ಅವರು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಸಂಜೆಯೇ ಸಿದ್ದಿಕಿಯವರಿಗೆ ಹೃದಯಘಾತವಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದ್ದು, ಎಕ್ಸ್ ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಮೂಲಕ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ. ಇನ್ನೂ 24 ಗಂಟೆವರೆಗೂ ಏನೂ ಹೇಳೋದಕ್ಕೆ ಆಗೋದಿಲ್ಲ ಅಂತ ವೈದ್ಯರು ಹೇಳಿದ್ದಾರೆ.

ನಿರ್ದೇಶಕ ಸಿದ್ದಿಕಿಯವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ದಿಢೀರ್‌ ಹೃದಯಘಾತವಾಗಿದೆ. ಅವರು ಹಲವಾರು ಜನಪ್ರಿಯ ಮಲಯಾಳಂ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಲ್ಮಾನ್‌ ನಟನೆಯ ಹಿಂದಿಯ ಬಾಡಿಗಾರ್ಡ್‌ ಚಿತ್ರವನ್ನೂ ಅವರೇ ನಿರ್ದೇಶಿಸಿದ್ದಾರೆ.

 

Share Post