BengaluruCrime

ವ್ಯಕ್ತಿಯನ್ನು ಕೊಂದು ದೇಹ ಠಾಣೆಗೆ ತಂದ ಆರೋಪಿ

ಬೆಂಗಳೂರು; ಹಣಕಾಸು ವಿಚಾರದಲ್ಲಿ ಜಗಳ ನಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿ, ಮೃತದೇಹದ ಸಮೇತ ಪೊಲೀಸ್‌ ಠಾಣೆಗೆ ಬಂದು ಶರಣಾಗಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನಡೆದಿದೆ. ಮಹೇಶಪ್ಪ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿ ರಾಜಶೇಖರ್‌ ಪೊಲೀಸರಿಗೆ ಶರಣಾಗಿದ್ದಾನೆ.

ಕಳೆದ ರಾತ್ರಿ ಹಣಕಾಸು ವಿಚಾರಕ್ಕೆ ರಾಜಶೇಖರ್‌ ಹಾಗೂ ಮಹೇಶಪ್ಪನ ನಡುವೆ ಜಗಳವಾಗಿದೆ. ಇದೇ ವೇಳೆ ರಾಜಶೇಖರ್‌ ಮಹೇಶಪ್ಪನ ಮೇಲೆ ತೀವ್ರ ಹಲ್ಲೆ ಮಾಡಿದ್ದಾನೆ. ಗಾಯವಾಗಿದ್ದರೂ ಮಹೇಶಪ್ಪನನ್ನು ಕಾರಿನಲ್ಲೇ ಇರಿಸಿಕೊಂಡಿದ್ದಾನೆ. ಬೆಳಗ್ಗೆ ಎದ್ದು ನೋಡಿದಾಗ ಮಹೇಶಪ್ಪ ಕಾರಿನಲ್ಲೇ ಸಾವನ್ನಪ್ಪಿರುವುದು ಗೊತ್ತಾಗಿದೆ. ಹೀಗಾಗಿ ರಾಜಶೇಖರ್‌ ಕೂಡಲೇ ಮೃತದೇಹದ ಸಮೇತ ಕಾರಿನಲ್ಲಿ ರಾಮಮೂರ್ತಿನಗರ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

Share Post