BengaluruCrime

ಮದುವೆಯಾಗಿ ಮೂರು ದಿನಕ್ಕೆ ವರ ಎಸ್ಕೇಪ್‌; ಆತ ಕಟ್ಟಿದ ಕಥೆ ಎಂತಾದ್ದು ಗೊತ್ತಾ..?

ಬೆಂಗಳೂರು; ಪ್ರೀತಿಯ ನಾಟಕವಾಡಿ, ಮದುವೆಯೂ ಆಗಿ ಮೂರೇ ದಿನಕ್ಕೆ ವರ ಎಸ್ಕೇಪ್‌ ಆಗಿದ್ದು, ನಂಬಿ ಮೋಸಹೋದ ಯುವತಿ ಈಗ ಪೊಲೀಸರ ಮೊರೆ ಹೋಗಿದ್ದಾಳೆ. ಕೆಆರ್‌ ಪುರಂ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಧರಣಿ ಎಂಬಾಕೆಯೇ ಮೋಸ ಹೋದ ಯುವತಿ. 

ಸುರೇಶ್‌ ಎಂಬಾತ ಫೆಬ್ರವರಿ 3 ರಂದು ನನ್ನನ್ನು ಮದುವೆಯಾಗಿದ್ದ. ಅನಂತರ ಮೂರು ದಿನ ನನ್ನ ಜೊತೆ ಸಂಸಾರ ಮಾಡಿದ್ದ. ಅನಂತರ ಹೊರಗೆ ಹೋದವನು ಬಂದೇ ಇಲ್ಲ ಎಂದು ಧರಣಿ ಆರೋಪಿಸಿದ್ದಾಳೆ. ಆದ್ರೆ ಆರೋಪಿ ಸುರೇಶ್‌ ಮಾತ್ರ ಬೇರೆ ಕಥೆ ಹೇಳುತ್ತಿದ್ದಾರೆ. ಶಾರ್ಟ್‌ ಮೂವಿ ಒಂದರ ಚಿತ್ರೀಕರಣದಲ್ಲಿ ತೆಗೆದ ಫೋಟೋಗಳನ್ನು ಧರಣಿ ತೋರಿಸುತ್ತಿದ್ದಾಳೆ. ನಾವು ಧರಣಿ ಜೊತೆ ವಿವಾಹವಾಗಿಲ್ಲ. ನಾವು ಸ್ನೇಹಿತರು ಅಷ್ಟೇ ಎಂದು ಹೇಳುತ್ತಿದ್ದಾನೆ.

Share Post