Bengaluru

Karnataka Bandh; ಬುರ್ಖಾ ಧರಿಸಿ ಖಾಲಿ ಕೊಡ ಹಿಡಿದ ವಾಟಾಳ್‌ ನಾಗರಾಜ್‌

ಬೆಂಗಳೂರು; ವಾಟಾಳ್‌ ನಾಗರಾಜ್‌ ಎಂದರೇನೇ ವಿನೂತನ ಪ್ರತಿಭಟನೆಗೆ ಹೆಸರು. ಹೊಸ ಹೊಸ ರೀತಿಯಲ್ಲಿ, ವಿನೂತನ ವೇಷಭೂಷಣಗಳಲ್ಲಿ ವಾಟಾಳ್‌ ಕಾಣಿಸಿಕೊಳ್ಳುತ್ತಾರೆ. ಇವತ್ತೂ ಕೂಡಾ ವಾಟಾಳ್‌ ಅವರ ವೇಷಭೂಷಣ ಗಮನ ಸೆಳೆಯುವಂತಿತ್ತು.

ಬುರ್ಖಾ ಧರಿಸಿದ್ದ ವಾಟಾಳ್‌ ನಾಗರಾಜ್‌, ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಡಾಲರ್ಸ್‌ ಕಾಲೋನಿಯ ತಮ್ಮ ನಿವಾಸದ ಬಳಿಯೇ ವಾಟಾಳ್‌ ನಾಗರಾಜ್‌ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾ ಮೆರವಣಿಗೆ ತಡೆದಿರುವ ರಾಜ್ಯ ಸರ್ಕಾರದ ವಿರುದ್ಧ ವಾಟಾಳ್‌ ನಾಗರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share Post