BengaluruCrime

ಪೊಲೀಸರೆಂದು ಬೆದರಿಸಿ ರಾಬರಿ ಮಾಡಿದ್ದ ಆರೋಪಿಗಳು ಅಂದರ್

ಬೆಂಗಳೂರು; ಪೊಲೀಸರ ವೇಷದಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಬೆದರಿಸಿ ಚಿನ್ನದ ಬಿಸ್ಕೆಟ್‌ ಹಾಗೂ ಆರು ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂರು ದಿನಗಳ ಹಿಂದೆ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಬಳಿ ಈ ಕೃತ್ಯ ಎಸಗಲಾಗಿತ್ತು.

ಮೂರು ದಿನಗಳ ಹಿಂದೆ ಸುಂದರಂ ಎನ್ನುವವರು ಶಿವಮೊಗ್ಗದಿಂದ ಚಿನ್ನದ ಬಿಸ್ಕೆಟ್‌ ಹಾಗೂ ಆರು ಲಕ್ಷ ರೂಪಾಯಿ ನಗದನ್ನು ತಂದಿದ್ದರು. ಅವರು ಚಿನ್ನದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದು, ಅದರ ವ್ಯಾಪಾರದ ಹಣವನ್ನು ತಂದಿದ್ದರು ಎನ್ನಲಾಗಿದೆ. ಇದನ್ನು ಅರಿತಿದ್ದ ಆರೋಪಿಗಳು ಪೊಲೀಸರೆಂದು ಹೇಳಿಕೊಂಡು ಬೆದರಿಕೆ ಸುಂದರಂ ಬಳಿ ದಿದ್ದ ಹಣ ಹಾಗೂ ಚಿನ್ನದ ಬಿಸ್ಕೆಟ್‌ನ್ನು ದೋಚಿದ್ದರು.

ಈ ಸಂಬಂಧ ಹೋಮ್ ಗಾರ್ಡ್ ಹಾಗೂ ಇಬ್ಬರು ಆಟೋ ಚಾಲಕರ ಬಂಧಿಸಲಾಗಿದೆ. ಹಣ ಹಾಗೂ ಚಿನ್ನದ ಜೊತೆ ಹೋಗುತ್ತಿರುವ ಮಾಹಿತಿ ಕಲೆ ಹಾಕಿದ್ದ ಹೋಮ್ ಗಾರ್ಡ್ಇ ಬ್ಬರು ಆಟೋ ಚಾಲಕರ ಜೊತೆ ಸೇರಿ ರಾಬರಿ ಮಾಡಿದ್ದ ಎನ್ನಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಭಂದಿಸಿ ಪೋಲೀಸರು ಮೂವರನ್ನ ಬಂಧಿಸಿದ್ದಾರೆ.

Share Post