BengaluruCrime

ಬೆಂಗಳೂರಿನಲ್ಲಿ ಹಿಂದಿ ಮಾತನಾಡದ ಕನ್ನಡದ ಕಾರ್ಮಿಕನ ಮೇಲೆ ಹಲ್ಲೆ

ಆನೇಕಲ್; ಹಿಂದಿ ಮಾತನಾಡು ಎಂದು ಕನ್ನಡದ ಕಾರ್ಮಿಕನಿಗೆ ಕಾಟ ಕೊಟ್ಟಿದ್ದಲ್ಲದೆ, ಆತನ ಮೇಲೆ ಮಾರಣಾಂತಿಕ ಹಲ್ಲೆ ಕೂಡಾ ನಡೆದಿದೆ.. ಬೆಂಗಳೂರಿನಲ್ಲಿ ಕರ್ನಾಟಕ ಕಾರ್ಮಿಕನ ಮೇಲೆ ಉತ್ತರಪ್ರದೇಶದ ಕಾರ್ಮಿಕರು ದಾಳಿ ಮಾಡಿದ್ದಾರೆ..

ಆನೇಕಲ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಯುಪಿ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಗ್ಗದ ಕೆಲಸ ಮಾಡುತ್ತಿದ್ದ ಕೃಷ್ಣ ಮೂರ್ತಿ ಹಲ್ಲೆಗೊಳಗಾದ ವ್ಯಕ್ತಿ.. ಇವರಿಗೆ ಹಿಂದಿ ಬರುವುದಿಲ್ಲ. ಕನ್ನಡ ಮಾತ್ರ ಮಾತನಾಡಿದ್ದಾರೆ.. ಆದ್ರೆ ಅಲ್ಲೇ ಕೆಲಸ ಮಾಡುವ ಉತ್ತರಪ್ರದೇಶದ ಕಾರ್ಮಿಕರು ಹಿಂದಿ ಮಾತನಾಡುವಂತೆ ತಾಕೀತು ಮಾಡಿದ್ದಾರೆ..

 ಆದ್ರೆ ಶಿವಲಿಂಗ ಕನ್ನಡ ಮಾತನಾಡಿದ್ದಕ್ಕೆ ಕಬ್ಬಿಣದ ರಾಡ್, ಮಗ್ಗದ ವಸ್ತುಗಳಿಂದ ಶಿವಲಿಂಗನ ಮೇಲೆ ಹಲ್ಲೆ ಮಾಡಲಾಗಿದೆ. ತಲೆ, ಕಿವಿಭಾಗಕ್ಕೆ ಗಾಯಗಳಾಗಿವೆ. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Share Post