BengaluruCinemaPolitics

ಬೀದರ್‌ನಲ್ಲಿ ಶಿವರಾಜ್‌ಕುಮಾರ್‌, ಚಿತ್ರದುರ್ಗದಲ್ಲಿ ಸುದೀಪ್‌ ಪ್ರಚಾರ

ಬೆಂಗಳೂರು; ಇನ್ನು ಮತದಾನ ಮೂರು ದಿನ ಇದೆ. ಹೀಗಾಗಿ ಚುನಾವಣಾ ಪ್ರಚಾರ ಕಣ ರಂಗೇರಿದೆ. ಇವತ್ತೂ ಕೂಡಾ ಚಿತ್ರರಂಗದ ಗಣ್ಯರು ಪ್ರಚಾರ ನಡೆಸಲಿದ್ದಾರೆ. ನಿನ್ನೆ ಧಾರವಾಡದಲ್ಲಿ ಜಗದೀಶ್‌ ಶೆಟ್ಟರ್‌ ಪರ ಪ್ರಚಾರ ನಡೆಸಿದ್ದ ಶಿವರಾಜ್‌ ಕುಮಾರ್‌ ಇಂದು ಬೀದರ್‌ನಲ್ಲಿ ಪ್ರಚಾರ ನಡೆಸಲಿದ್ದಾರೆ. ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಅಶೋಕ್‌ ಖೇಣಿಯವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ಪರವಾಗಿ ಶಿವರಾಜ್‌ ಕುಮಾರ್‌ ಅವರು ಪ್ರಚಾರ ಮಾಡಲಿದ್ದಾರೆ. ಗೀತಾ ಶಿವರಾಜ್‌ಕುಮಾರ್‌ ಕೂಡಾ ಸಾಥ್‌ ನೀಡಲಿದ್ದಾರೆ.

ಶಿವರಾಜ್‌ಕುಮಾರ್‌ ಅವರು ಮನ್ನಾಏಖೇಳಿ, ಬೇಮಖೇಡದಲ್ಲಿ ರೋಡ್‌ ಶೋಮ ಮಾಡಲಿದ್ದಾರೆ. ಅಶೋಕ್‌ ಖೇಣಿ ಪರ ಅವರು ಮತಯಾಚನೆ ಮಾಡಲಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಸುದೀಪ್‌ ಪ್ರಚಾರ ನಡೆಸುತ್ತಿರುವುದು ಗೊತ್ತೇ ಇದೆ. ಅವರು ಇಂದು ಚಿತ್ರದುರ್ಗ ಜಿಲ್ಲೆಯಲ್ಲಿರುತ್ತಾರೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭರಮಸಾಗರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಇಂದು ಸುದೀಪ್‌ ಅವರು ಚಳ್ಳಕೆರೆ ಮತಕ್ಷೇತ್ರದಲ್ಲಿ ಕೂಡಾ ರೋಡ್​ ಶೋ ಮಾಡಲಿದ್ದಾರೆ. ಮಧ್ಯಾಹ್ನ ಮೂರು ಗಂಟೆಯ ನಂತರ ಈ ರೋಡ್‌ ಶೋಗಳು ಆರಂಭವಾಗಲಿವೆ.

Share Post