BengaluruPolitics

ಇಂದು ಘಟಾನುಘಟಿ ಬಿಜೆಪಿ ನಾಯಕರಿಂದ ಪ್ರಚಾರ; ಎಲ್ಲೆಲ್ಲಿ ಯಾರ್ಯಾರು ಇರ್ತಾರೆ..?

ಬೆಂಗಳೂರು; ಮತದಾನಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಬಹಿರಂಗ ಪ್ರಚಾರ ನಾಳೆ ಸಂಜೆಗೆ ಅಂತ್ಯವಾಗಲಿದೆ. ನಾಳೆ ಸಂಜೆಯೊಳಗೆ ಹೊರಗಿನವರೆಲ್ಲಾ ಜಾಗ ಖಾಲಿ ಮಾಡಬೇಕು. ಹೀಗಾಗಿ ಇಂದು ಮತ್ತು ನಾಳೆ ಅಬ್ಬರದ ಪ್ರಚಾರ ನಡೆಯಲಿದೆ. ಮೋದಿ ಇಂದು ರೋಡ್‌ ಶೋ ಮುಗಿಸಿ ದೆಹಲಿಗೆ ತೆರಳಲಿದ್ದಾರೆ. ಇಂದು ಬಿಜೆಪಿಯ ಹಲವು ನಾಯಕರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂತಿಮ ಹಂತದಲ್ಲಿ ಜನರನ್ನು ಓಲೈಸುವ ಕೆಲಸ ಮಾಡಲಿದ್ದಾರೆ.

  ಇಂದು ಯಾವ ಬಿಜೆಪಿ ನಾಯಕ-ನಾಯಕಿ ಎಲ್ಲಿ ಪ್ರಚಾರ ನಡೆಸುತ್ತಾರೆ..?

೧. ನರೇಂದ್ರ ಮೋದಿ – ಬೆಂಗಳೂರು, ಶಿವಮೊಗ್ಗ, ನಂಜನಗೂಡು

೨.  ಅಮಿತ್ ಶಾ – ಬೆಳಗಾವಿ ದಕ್ಷಿಣ, ಹುನಗುಂದ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಆನೇಕಲ್

೩. ಜೆ.ಪಿ. ನಡ್ಡಾ – ಹರಪನಹಳ್ಳಿ, ಶಿರಗುಪ್ಪ, ಕೂಡ್ಲಿಗಿ

೪.  ಎಸ್. ಜೈಶಂಕರ್ – ಮೈಸೂರು

೫. ವಿ.ಕೆ. ಸಿಂಗ್ – ಮಡಿಕೇರಿ, ವಿರಾಜಪೇಟೆ

೬.  ಪ್ರಲ್ಹಾದ್ ಜೋಶಿ – ಕೆಜಿಎಫ್

೭. ನಿರ್ಮಲಾ ಸೀತಾರಾಮನ್ – ಬಸವನಗುಡಿ

೮. ಸ್ಮೃತಿ ಇರಾನಿ – ತೇರದಾಳ, ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ

೯.  ದೇವೇಂದ್ರ ಫಡ್ನವಿಸ್ – ಕೊಪ್ಪಳ, ಹಳಿಯಾಳ, ನಿಪ್ಪಾಣಿ

೧೦. ಬಿ.ಎಸ್. ಯಡಿಯೂರಪ್ಪ – ಹಿರೇಕೆರೂರು, ಶಿವಮೊಗ್ಗ ಗ್ರಾಮಾಂತರ

೧೧. ಬಸನಗೌಡ ಪಾಟೀಲ್ ಯತ್ನಾಳ್ – ಹುನಗುಂದ, ಬಾಗಲಕೋಟೆ, ಬಬಲೇಶ್ವರ

೧೨.  ಕೆ.ಎಸ್. ಈಶ್ವರಪ್ಪ – ಹೊನ್ನಾಳಿ

೧೩. ಸುದೀಪ್ – ನರಗುಂದ, ಹೊಳಲ್ಕೆರೆ, ಚಳ್ಳಕೆರೆ

Share Post