Bengaluru

ಸಂತೋಷ್‌ ಆತ್ಮಹತ್ಯೆ ಆತುರದ ನಿರ್ಧಾರ; ಸಚಿವ ಆರ್‌.ಅಶೋಕ್‌

ಬೆಂಗಳೂರು: ಸಂತೋಷ್‌ ಪಾಟೀಲ್‌ ಅವರ ಆತ್ಮಹತ್ಯೆ ಆತುರದ ನಿರ್ಧಾರ ಎಂದು ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅನ್ಯಾಯ ಆಗಿದ್ದರೆ ಕೋರ್ಟ್‌ ಮೊರೆ ಹೋಗಬಹುದಿತ್ತು. ತನಿಖಾ ಸಂಸ್ಥೆಗಳ ಮೊರೆಹೋಗಬಹುದಿತ್ತು ಎಂದು ಹೇಳಿದ್ದಾರೆ.

ಸಂತೋಷ್‌ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಅನ್ಯಾಯ ಆಗಿದ್ದರೆ ಹೋರಾಡಿ ಗೆಲ್ಲಬೇಕಾಗಿತ್ತು. ಸಚಿವ ಈಶ್ವರಪ್ಪ ಅವರು ಸಂತೋಷ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದೇ ರೀತಿ ಸಂತೋಷ್‌ ಕೂಡಾ ಕಾನೂನಿನ ಮೂಲಕ ನ್ಯಾಯ ಪಡೆಯಬೇಕಿತ್ತು ಎಂದು ಆರ್‌.ಅಶೋಕ್‌ ಹೇಳಿದ್ದಾರೆ.

Share Post