Districts

ಈಶ್ವರಪ್ಪ ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸಲ್ಲ; ಪ್ರಶಾಂತ್‌ ಪಾಟೀಲ್‌

ಬೆಳಗಾವಿ: ನನ್ನ ಸಹೋದರ ಸಂತೋಷ್‌ ಈಶ್ವರಪ್ಪ ಅವರ ಜೊತೆ ಚೆನ್ನಾಗಿದ್ದ. ಆದ್ರೆ ಈಗ ಈಶ್ವರಪ್ಪ ಅವರು ಸಂತೋಷ್‌ ಯಾರು ಅಂತ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ ಎಂದು ಸಂತೋಷ್‌ ಸಹೋದರ ಪ್ರಶಾಂತ್‌ ಪಾಟೀಲ್‌ ಆರೋಪಿಸಿದ್ದಾರೆ. ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ತಿಳಿಸಿದರು.

ಗುತ್ತಿಗೆದಾರನಾಗಿದ್ದ ನನ್ನ ತಮ್ಮ ಸಂತೋಷ್ ಪಾಟೀಲ‌ ಸಾವಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನೇರ ಕಾರಣ. ಸಂತೋಷ್‌ ಹಿಂದಿನಿಂದಲೂ ಗುತ್ತಿಗೆ ಕೆಲಸ ಮಾಡುತ್ತಿದ್ದ. ಸುಮಾರು 4 ಕೋಟಿ ಮೊತ್ತದ ಕೆಲಸ ಮಾಡಿದ್ದೇನೆ. ಆದ್ರೆ ಬಿಲ್‌ ಆಗಿಲ್ಲ. ಇದರಿಂದ ತುಂಬಾನೇ ಕಷ್ಟವಾಗಿದೆ ಎಂದು ಹೇಳಿದ್ದ. ಅಂತೋಷ್‌ ವಿರುದ್ಧ ಮಾನನಷ್ಟ ಮೊಕದ್ದಮೆಯೂ ದಾಖಲಾಗಿತ್ತು. ಜೀವ ಬೆದರಿಕೆಯೂ ಇದೆ ಎಂದಿದ್ದ ಎಂದು ಪ್ರಶಾಂತ್‌ ಪಾಟೀಲ್‌ ಹೇಳಿದ್ದಾರೆ.

Share Post