BengaluruCrime

ಸಾಕು ನಾಯಿ ಕಚ್ಚಿದ್ದಕ್ಕೆ ದೂರು; ರೊಚ್ಚಿಗೆದ್ದ ವ್ಯಕ್ತಿಯಿಂದ ಬೈಕ್‌ಗಳಿಗೆ ಬೆಂಕಿ

ಬೆಂಗಳೂರು; ಬೆಂಗಳೂರಿನಲ್ಲಿ ಸಾಕು ನಾಯಿಗಳ ಹಾವಳಿ ಜಾಸ್ತಿ. ಬೆಳಗ್ಗೆ ಹಾಗೂ ಸಂಜೆ ಹೊತ್ತು ಮಾಲೀಕರು ವಾಕಿಂಗ್‌ ಕರೆದುಕೊಂಡು ಬರುತ್ತಾರೆ. ಈ ವೇಳೆ ಅವುಗಳನ್ನು ಸಾರ್ವಜನಿಕರಿಗೆ ಕಚ್ಚುವ ಘಟನೆಗಳು ನಡೆಯುತ್ತವೆ. ಹಾಗೆಯೇ ಸಾಕು ನಾಯಿಯೊಂದು ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಗೆ ಕಚ್ಚಿತ್ತು. ಇದರಿಂದಾಗಿ ಆ ಮಹಿಳೆ ನಾಯಿ ಮಾಲೀಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಇದೇ ಜಿದ್ದಿಗೆ ನಾಯಿಯ ಮಾಲೀಕ ಆ ಮಹಿಳೆಯ ಮಗ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾನೆ.

ಕೊತ್ತನೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಜೂನ್ 13ರಂದು ಪುಷ್ಪಾ ಎಂಬುವವರಿಗೆ ಸಾಕುನಾಯಿ ಕಚ್ಚಿತ್ತು. ಹೀಗಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಜೊತೆಗೆ ನಾಯಿ ಮಾಲೀಕನ ಜೊತೆ ಈ ಮಹಿಳೆಗೆ ಚೀಟಿ ವ್ಯವಹಾರವಿತ್ತು. ನಾಯಿ ಕಚ್ಚಿದ್ದರಿಂದ ಆ ಮಹಿಳೆ ಚೀಟಿ ಹಣ ಕೊಡದೆ ಅದನ್ನು ಚಿಕಿತ್ಸೆ ಬಳಸಿಕೊಂಡಿದ್ದರು.

ಇದರಿಂದಾಗಿ ರೊಚ್ಚಿಗೆದ್ದ ಶ್ವಾನದ ಮಾಲೀಕ ನಂಜುಂಡಸ್ವಾಮಿ, ದೂರುದಾರ ಮಹಿಳೆಯ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

Share Post