BengaluruPolitics

ಸಾಮೂಹಿಕ ಸಂಕಲ್ಪಕ್ಕೆ 26 ಪಕ್ಷಗಳ ನಾಯಕರ ಸಹಿ; ಮಮತಾ ಬ್ಯಾನರ್ಜಿ

ಬೆಂಗಳೂರು; ಸಾಮೂಹಿಕ ಸಂಕಲ್ಪಕ್ಕೆ 26 ಪಕ್ಷಗಳ ನಾಯಕರ ಸಹಿ ಹಾಕಿದ್ದೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕೂಟದ ಉದ್ದೇಶ ಹಾಗೂ ಗುರಿ ಸಾಧನೆಗೆ ನಾವೆಲ್ಲಾ ಸಂಕಲ್ಪ ತೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ದೇಶದಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದೆ. ಜನ ವಿರೋಧಿ ಆಡಳಿತವಿದೆ. ಇದನ್ನು ನಾವು ಕೊನೆಗಾಣಿಸಬೇಕಿದೆ. ಹೀಗಾಗಿ ನಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನೂ ನಾವು ಮರೆತು ಒಂದಾಗುತ್ತಿದ್ದೇವೆ. ಎಲ್ಲರೂ ಒಂದಾಗುವ ಸಂಕಲ್ಪ ತೊಟ್ಟಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

 

Share Post