BengaluruCrime

ಸಚಿವ ಅಹ್ಮದ್‌ ಖಾನ್‌ ಆಪ್ತನ ನಿವಾಸದ ಮೇಲೆ ಐಟಿ ರೇಡ್‌

ಬೆಂಗಳೂರು; ರಾಜ್ಯ ಸರ್ಕಾರದ ವಸತಿ ಸಚಿವ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಜಮೀರ್‌ ಅಹ್ಮದ್‌ ಖಾನ್‌ ಅವರ ಆಪ್ತನ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.. ಮಾಜಿ ಎಂಎಲ್‌ಸಿಯೂ ಆಗಿರುವ ಎಂ.ಸಿ.ವೇಣುಗೋಪಾಲ್‌ ಮನೆಯ ಮೇಲೆ ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ..

ಬೆಂಗಳೂರಿನ ಜೆಪಿ ನಗರದಲ್ಲಿ ಎಂ.ಸಿ.ವೇಣುಗೋಪಾಲ್‌ ಅವರ ನಿವಾಸವಿದೆ.. ಇಂದು ಮುಂಜಾನೆಯೇ ಐಟಿ ಅಧಿಕಾರಿಗಳು ಅವರ ಮನೆಯ ಮೇಲೆ ದಾಳಿ ಮಾಡಿದ್ದಾರೆ.. ಮನೆಯ ಮುಖ್ಯ ದ್ವಾರದ ಮೂಲಕ ಇಂದು ಬೆಳಗ್ಗೆ 6.10ಕ್ಕೆ ಒಳಗೆ ಹೋದ ಅಧಿಕಾರಿಗಳು, ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ..

4 ಇನ್ನೊವಾ ಕಾರುಗಳಲ್ಲಿ ಬಂದಿರುವ 15 ಅಧಿಕಾರಿಗಳಿಂದ ಈ ತಪಾಸಣೆ ನಡೆಯುತ್ತಿದೆ..

 

Share Post