CrimeDistricts

ಬಾಲಕಿಯ ಕಿಡ್ನ್ಯಾಪ್‌ಗೆ ಯತ್ನಿಸಿದ ಯುವಕರು!; ಮುಂದೇನಾಯ್ತು?

ಚಿತ್ರದುರ್ಗ; ಹಾಡಹಗಲೇ ಮುಸ್ಲಿಂ ಬಾಲಕಿಯನ್ನು ಕಿಡ್ನ್ಯಾಪ್‌ ಮಾಡುವ ಯತ್ನ ನಡೆದಿದೆ.. ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಜ್ಞಾನ ಭಾರತಿ ಸ್ಕೂಲ್‌ ಮುಂಭಾಗ ಈ ಘಟನೆ ನಡೆದಿದೆ. ಬಾಲಕಿಯನ್ನು ಕೆಲ ದುಷ್ಕರ್ಮಿಗಳು ಎಳೆದೊಯ್ಯಲು ಪ್ರಯತ್ನಿಸಿದ್ದಾರೆ.. ಈ ವೇಳೆ ಬಾಲಕಿ ಕಿರುಚಾಡಿದ್ದಾಳೆ.. ಇದರಿಂದಾಗಿ ದುಷ್ಕರ್ಮಿಗಳ ಬಾಲಕಿಯನ್ನು ಅಲ್ಲೇ ಬಿಟ್ಟು ಎಸ್ಕೇಪ್‌ ಆಗಲು ಯತ್ನಿಸಿದ್ದಾರೆ..
ಸಾರ್ವಜನಿಕರು ಓಡಿಹೋಗುತ್ತಿದ್ದ ದುಷ್ಕರ್ಮಿಗಳ ಬೆನ್ನು ಹತ್ತಿದ್ದಾರೆ.. ಒಬ್ಬನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.. ಮತ್ತೊಬ್ಬ ಪರಾರಿಯಾಗಿದ್ದಾನೆ.. ಸಿಕ್ಕಿಬಿದ್ದ ಆರೋಪಿಯನ್ನು ಟಗರುಹಟ್ಟಿ ಪಾರ್ಥ ಎಂದು ಗುರುತಿಸಲಾಗಿದೆ.. ಬಾಲಕಿ ಕೂಡಾ ಆರೋಪಿಯನ್ನು ಚಪ್ಪಲಿಯಿಂದ ಹೊಡೆದಿದ್ದಾಳೆ..
ಆನಂದ್‌ ಹಾಗೂ ಪಾರದ್ಥ ಎಂಬುವವರೇ 17 ವರ್ಷ ಬಾಲಕಿಯ ಅಪಹರಣಕ್ಕೆ ಯತ್ನ ಮಾಡಿದ್ದರು.. ಕಿಡ್ನ್ಯಾಪ್‌ಗೆ ಬಳಸಲಾಗಿದ್ದ ಕಾರನ್ನು ವಶಪಡಿಸಿಕೊಳಲಾಗಿದೆ.. ಮಹಿಳಾ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ..

Share Post