BengaluruPolitics

ಯಡಿಯೂರಪ್ಪ ಪರ ಮಾತಾಡಿದರೆ ನೋಟಿಸ್‌ ಕೊಡ್ತಾರೆ; ರೇಣುಕಾಚಾರ್ಯ

ಬೆಂಗಳೂರು; ಯಡಿಯೂರಪ್ಪ ಅವರ ಪರ ಮಾತನಾಡಿದರೆ ನೋಟಿಸ್‌ ಕೊಡ್ತಾರೆ. ಅವರ ವಿರುದ್ಧ ಮಾತನಾಡಿದರೆ ಬೆನ್ನು ತಟ್ತಾರೆ ಅಂತ ತಮ್ಮದೇ ಪಕ್ಷದ ನಾಯಕರ ಜೊತೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಸಾಮಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಪಕ್ಷದಲ್ಲಿ ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಬಿಜೆಪಿ ಉಳಿಸಿ ಅಭಿಯಾನ ಶುರು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯಲ್ಲಿ ಶಿಸ್ತುಪಾಲನಾ ಸಮಿತಿ ಅನ್ನೋದು ಒಂದಿದೆ ಎಂಬುದು ನನಗೆ ಗುರುವಾರವೇ ಗೊತ್ತಾಗಿದ್ದು. ನನಗೆ ಈ ರೀತಿ ಮಾತನಾಡಿ ಎಂದು ಯಾರೂ ಹೇಳಿಲ್ಲ. ಪಕ್ಷ ತಾಯಿ ಸಮಾನ ಅದಕ್ಕಾಗಿ ಮಾತನಾಡುತ್ತಿದ್ದೇನೆ. ಬಿಜೆಪಿಯಲ್ಲಿ ವೀರಶೈಲ ಲಿಂಗಾಯತರನ್ನು ಕಡೆಗಣಿಸುತ್ತಿದ್ದಾರೆ. ಈ ಬಗ್ಗೆ ಮೋದಿ, ಅಮಿತ್‌ ಶಾ ಹಾಗೂ ನಡ್ಡಾ ಅವರಿಗೆ ಪತ್ರ ಬರೆಯುತ್ತೇನೆ ಎಂದು ರೇಣುಕಾಚಾರ್ಯ ಹೇಳಿದರು.

ನನಗೆ ನೋಟಿಸ್‌ ಕೊಟ್ಟಾದ ಮೇಲೆ ಇಂದಿನ ಸಭೆಗೆ ನಾನು ಹೋಗಿದ್ದರೆ ಗೌರವ ಇರ್ತಿರಲಿಲ್ಲ. ಹೀಗಾಗಿ ನಾನು ಇವತ್ತಿನ ಬಿಜೆಪಿ ಸಭೆಗೆ ಹೋಗಿಲ್ಲ. ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ನಾನು ಬಿಜೆಪಿ ಉಳಿಸಿ ಅಭಿಯಾನ ಶುರು ಮಾಡುತ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

Share Post