BengaluruPolitics

ಅಶ್ವತ್ಥ್‌ನಾರಾಯಣ್‌ಗೆ ನನ್ನ ಇತಿಹಾಸ ಹೇಳಿದ್ದೇನೆ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ನನ್ನ ಹಾಗೂ ಬೆಂಗಳೂರಿನ ನಂಟು ತುಂಬಾ ಹಳೆಯದು. ಮಾಜಿ ಸಚಿವ ಅಶ್ವತ್ಥನಾರಾಯಣ್‌ ಅವರು ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ಗೂ ಬೆಂಗಳೂರಿಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದ ಅಶ್ವತ್ಥನಾರಾಯಣ್‌ ಅವರಿಗೆ ಈ ರೀತಿ ಉತ್ತರಿಸಿದರು.

ನನ್ನ ಇತಿಹಾಸ ಏನು ಅನ್ನೋದನ್ನು ಅಶ್ವತ್ಥ್‌ ನಾರಾಯಣ್‌ಗೆ ಹೇಳಿದ್ದೇವೆ. ನನಗೂ ಬೆಂಗಳೂರಿಗೂ ತುಂಬಾ ಹಳೆಯ ಸಂಬಂಧ. ಏನಾದರೂ ಮಾತನಾಡುವಾಗ ಇತಿಹಾಸ ತಿಳಿದುಕೊಂಡು ಮಾತನಾಡಬೇಕು ಎಂದು ಅಶ್ವತ್ಥ್‌ ನಾರಾಯಣ್‌ಗೆ ಡಿಕೆಶಿ ಕಿವಿಮಾತು ಹೇಳಿದರು.

Share Post