BengaluruPolitics

ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸ ಗೊತ್ತಾಗಲಿದೆ; ಡಿಕೆಶಿಗೆ ಅಶ್ವತ್ಥನಾರಾಯಣ್‌ ತಿರುಗೇಟು

ಬೆಂಗಳೂರು;‌ ಅಶ್ವತ್ಥ್‌ ನಾರಾಯಣ್‌ಗೆ ನನ್ನ ಇತಿಹಾಸ ಹೇಳಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಇದಕ್ಕೆ ಮಾಜಿ ಸಚಿವ ಅಶ್ವತ್ಥ್‌ ನಾರಾಯಣ್‌ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸ ಗೊತ್ತಾಗಲಿವೆ ಎಂದು ಹೇಳಿದ್ದಾರೆ.

ನನಗೂ ರಾಮನಗರಕ್ಕೂ ಏನು ಸಂಬಂಧ ಎಂದು ಕೇಳಿದ್ದರು. ನನ್ನ ಪೂರ್ವಿಕರ ಕರ್ಮಭೂಮಿ ರಾಮನಗರ. ನನ್ನ ಮೊದಲ ಹೆಸರು ಕೆಂಪೇಗೌಡ ಎಂದಿತ್ತು. ನಾವು ರಾಮನಗರದಲ್ಲಿ ಎಂದೂ ಮಾಡದ ಅಭಿವೃದ್ಧಿಯನ್ನು ಮಾಡಿ ತೋರಿಸಿದ್ದೇವೆ. ಡಿ.ಕೆ.ಶಿವಕುಮಾರ್‌ ಅವರು ಮಾತನಾಡುವ ಮೊದಲು ಅಭಿವೃದ್ಧಿ ಮಾಡಿ ನಂತರ ಮಾತನಾಡಲಿ ಎಂದಿದ್ದಾರೆ.

Share Post