BengaluruCrime

ಅತ್ತಿಬೆಲೆ ಭಾರಿ ಪಟಾಕಿ ಅವಘಡ; ಮೂವರ ಸಾವು!

ಬೆಂಗಳೂರು; ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದಂತೆ ಪಟಾಕಿ ಅವಘಡಗಳು ಹೆಚ್ಚಾಗುತ್ತವೆ. ಈ ಬಾರಿಯೂ ಕೂಡಾ ಭಾರಿ ಅಗ್ನ ಅವಘಡ ನಡೆದಿದೆ. ಆನೆಕಲ್‌ನ ಅತ್ತಿಬೆಲೆಯಲ್ಲಿ ತಮಿಳುನಾಡಿನಿಂದ ತಂದಿದ್ದ ಪಟಾಕಿಗಳನ್ನು ಅನ್‌ಲೋಡ್‌ ಮಾಡುತ್ತಿದ್ದ ವೇಳೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸುಮಾರು ನಾಲ್ಕರಿಂದ ಐದು ಪಟಾಕಿ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ನವೀನ್‌ ಎಂಬುವವರಿಗೆ ಸೇರಿದ ನಾಲ್ಕೈದು ಪಟಾಕಿ ಅಂಗಡಿಗಳು ಅತ್ತಿಬೆಲೆಯಲ್ಲಿವೆ. ಇಲ್ಲಿಗೆ ತಮಿಳುನಾಡಿನಿಂದ ಲೋಡುಗಟ್ಟಲೆ ಪಟಾಕಿಗಳನ್ನು ತರಲಾಗಿತ್ತು. ಇವುಗಳನ್ನು ಅನ್‌ಲೋಡ್‌ ಮಾಡಲಾಗುತ್ತಿತ್ತು. ಈ ವೇಳೆ ಕಿಡಿ ತಾಗಿ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಭಾರಿ ಶಬ್ದ ಬಂದಿದ್ದು, ಬೆಂಕಿ ಮುಗಿಲೆತ್ತರಕ್ಕೆ ಚಾಚಿದೆ. ಜನರ ಭಯಭೀತಿಯಿಂದ ಓಡಿದ್ದಾರೆ.

ಸುಮಾರು ನಾಲ್ಕೈದು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ. ಯಾವುದೇ ಸಾವುನೋವು ಸಂಭವಿಸಿದ್ದರ ಬಗ್ಗೆ ವರದಿಯಾಗಿಲ್ಲ. ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಬೆಂಕಿ ನಂದಿಸುವ ಕೆಲಸ ಭರದಿಂದ ಸಾಗಿದೆ.

 

Share Post