CrimeDistricts

ತಂಗಿ ಮೇಲಿನ ಸಿಟ್ಟಿಗೆ ಪುಟಾಣಿಯನ್ನು ಕೊಂದಳಾ ಆಕೆ..?

ಚಿಕ್ಕಬಳ್ಳಾಪುರ; ಆರು ವರ್ಷದ ಗಂಡು ಮಗುವನ್ನು ಕೊಂದು, ಮೃತದೇಹವನ್ನು ಹೂತುಹಾಕಲಾಗಿದೆ. ಸ್ವಂತ ದೊಡ್ಡಮ್ಮನೇ ಈಕೃತ್ಯ ಎಸಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ಮುತಕದಹಳ್ಳಿ ಗ್ರಾಮದ ಮಾವಿನ ತೋಪಿನಲ್ಲಿ ಈ ಕೃತ್ಯ ಎಸಗಲಾಗಿದೆ.

ಅನಿತಾ ಹಾಗೂ ಅಂಬಿಕಾ ಇಬ್ಬರೂ ಅಕ್ಕ ತಂಗಿಯರು. ಅನಿತಾಳ ಆರು ವರ್ಷದ ಮಗನೇ ಕೊಲೆಯಾದ ಬಾಲಕ. ಅನಿತಾಳ ಅಕ್ಕ ಅಂಬಿಕಾ ಅನೈತಿಕ ಸಂಬಂಧ ಇತ್ತಂತೆ. ಇದನ್ನು ತಿಳಿದ ಅನಿತಾ ವಿರೋಧ ವ್ಯಕ್ತಪಡಿಸಿದ್ದಳು. ಈ ಕಾರಣಕ್ಕಾಗಿ ಇಬ್ಬರ ನಡುವೆ ವೈಮನಸ್ಯ ಏರ್ಪಟ್ಟಿತ್ತು. ಇದೇ ಜಿದ್ದಿನ ಮೇಲೆ ತನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ಅಂಬಿಕಾ ವಿರುದ್ಧ ತಂಗಿ ಅನಿತಾ ಆರೋಪ ಮಾಡಿದ್ದಾಳೆ.

ಸ್ಥಳಕ್ಕೆ ಪೆರೆಸಂದ್ರ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

 

Share Post