Bengaluru

ತಾಕತ್ತಿದ್ದರೆ ಪಕ್ಷಕ್ಕೆ ಬರುವವರ ಹೆಸರು ಬಹಿರಂಗಪಡಿಸಲಿ: ಹೆಚ್‌ಡಿಕೆ

ಬೆಂಗಳೂರು: ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ನಾಯಕರು ಬಿಜೆಪಿ-ಜೆಡಿಎಸ್‌ ಎಂಎಲ್‌ಎಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರಕ್ಕೆ ಸ್ವಲ್ಪ ಖರವಾಗೆ ಉತ್ತರ ನೀಡಿದ ಕುಮಾರಸ್ವಾಮಿ ಬರೀ ಹೇಳೋದಲ್ಲಯ್ಯಾ…ತಾಕತ್ತಿದ್ದರೆ ಹೆಸರನ್ನು ಬಹಿರಂಗ ಮಾಡಿ ಎಂದು ಸವಾಲ್‌ ಹಾಕಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಬೇರೆ ಪಕ್ಷಗಳಿಂದ ನಾಯಕರು ವಲಸೆ ಬರಲು ಸಿದ್ದವಾಗಿದ್ದಾರೆ ಎಂದು ಹೇಳ್ತಿದ್ದಾರೆ. ನಮ್ಮ ಬಳಿ ಪಟ್ಟಿಗಳನ್ನ ಇಟ್ಕೊಂಡಿದ್ದೇವೆ ಅಂತಿದಾರೆ. ಈ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಜೆಡಿಎಸ್‌ನಿಂದ ಶಾಸಕರು ಬರ್ತಿದ್ದಾರೆ ಅಂತಾರೆ ಈಕಡೆ ಬಿಜೆಪಿಯವರು ಕಾಂಗ್ರೆಸ್ ಶಾಸಕರು ಬರ್ತಾರೆ ಅಂತಿದಾರೆ. ಹೀಗೆ ಹೇಳುವ ಬದಲು ಯಾರ್ಯಾರು ಅಂತ ಹೆಸರು ಹೇಳಿ. ಕಾಂಗ್ರೆಸ್ನವರಿಗೆ ನಾಲಗೆ ಹದ್ದುಬಸ್ತಿನಲ್ಲಿಲ್ಲ ಜೆಡಿಎಸ್ ಅನ್ನು ಬಿಜೆಪಿ ಬಾಲಂಗೋಚಿ, ಅವರನ್ನು ತುಮಕೂರಿನಿಂದ ಒದ್ದು ಓಡಿಸಿ ಎಂಬ ಮಾತುಗಳನ್ನಾಡಿದ್ದಾರೆ.

ಕಾಂಗ್ರೆಸ್, ಬಿಜೆಪಿ ಇಬ್ಬರಿಗೂ ನಾನು ಕೇಳ್ತೇನೆ ಯಾರ್ಯಾರು ಇದ್ದಾರೆ ಅನ್ನೋದನ್ನ ಹೇಳಲಿ ಯಾಋಏ ಹೋದರೂ ಅದರಿಂದ ನನಗೇನು‌ ಗಾಬರಿಯಿಲ್ಲ ಎಂದು ಸಮಾಧಾನವಾಗಿ ಉತ್ತರ ನೀಡಿದ್ದಾರೆ.

Share Post