BengaluruCrime

ಬ್ರೇಕ್‌ ಬದಲು ಆಕ್ಸಿಲೇಟರ್‌ ಒತ್ತಿದ ಆಂಬುಲೆನ್ಸ್‌ ಚಾಲಕ; ಮುಂದೇನಾಯ್ತು..?

ಬೆಂಗಳೂರು; ಆಂಬ್ಯುಲೆನ್ಸ್‌ ಚಾಲಕನೊಬ್ಬ ಬ್ರೇಕ್‌ ಒತ್ತಲು ಹೋಗಿ ಆಕ್ಸಿಲೇಟರ್‌ ಒತ್ತಿದ್ದು, ಇದರಿಂದಾಗಿ ಸರಣಿ ಅಪಘಾತ ನಡೆದಿದೆ.. ಆದ್ರೆ ಅದೃಷ್ಟವಶಾತ್‌ ಭಾರಿ ಅನಾಹುತವೊಂದು ತಪ್ಪಿದೆ.. ಬೆಂಗಳೂರಿನ ಸಿಟಿ ಮಾರ್ಕೆಟ್‌ ಬಳಿ ಈ ದುರ್ಘಟನೆ ನಡೆದಿದೆ..

ಕಳೆದ ರಾತ್ರಿ ಆಂಬ್ಯುಲೆನ್ಸ್‌ ಒಂದು ಕೆಆರ್‌ ಮಾರ್ಕೆಟ್‌ ಕಡೆಯಿಂದ ಸ್ಯಾಟಲೈಟ್‌ ಕಡೆಗೆ ಹೋಗುತ್ತಿತ್ತು.. ಈ ವೇಳೆ ಆಂಬ್ಯುಲೆನ್ಸ್‌ ಚಾಲಕ ಬ್ರೇಕ್‌ ಬದಲು ಆಕ್ಸಿಲೇಟರ್‌ ಒತ್ತಿದ್ದಾನೆ.. ಇದರಿಂದಾಗಿ ಮೂರು ಕಾರು ಹಾಗೂ ಒಂದು ಬೈಕ್‌ ನಡುವೆ ಸರಣಿ ಅಪಘಾತ ನಡೆದಿದೆ..

ಈ ಘಟನೆಯಲ್ಲಿ ಬೈಕ್‌ ಸವಾರನ ಕಾಲಿಗೆ ಹಾಗೂ ಕಾರೊಂದರ ಚಾಲಕನಿಗೆ ಗಾಯಗಳಾಗಿವೆ.. ಈ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.. ಅಂಬ್ಯುಲೆನ್ಸ್‌ಗೆ ಕರೆ ಬಂದ ಹಿನ್ನೆಲೆಯಲ್ಲಿ ರೋಗಿಯನ್ನು ಕರೆದೊಯ್ಯಲು ಅಂಬ್ಯುಲೆನ್ಸ್‌ ಹೋಗುತ್ತಿತ್ತು.. ಈ ವೇಳೆ ಈ ದುರ್ಘಟನೆ ನಡೆದಿದೆ…

ಈ ಬಗ್ಗೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ..

 

Share Post