BengaluruPolitics

ಗುಬ್ಬಿ ಶಾಸಕ ಬಿಜೆಪಿಗೆ ಮತ ಹಾಕಿದ್ದಾರೆ; ಜೆಡಿಎಸ್‌ ನಾಯಕ ಹೆಚ್‌.ಡಿ.ರೇವಣ್ಣ

ಬೆಂಗಳೂರು; ಕುಮಾರಸ್ವಾಮಿ ಕರ್ಕೊಂಡು ಬಂದು ಎಂಎಲ್‌ಎ ಮಾಡ್ತಾರೆ. ಕೊನೆಗೆ ಅಂತಹವರೇ ಬೆನ್ನಿಗೆ ಚೂರು ಹಾಕ್ತಾರೆ ಎಂದು ಜೆಡಿಎಸ್‌ ನಾಯಕ ಹೆಚ್‌.ಡಿ.ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರು ಕುಮಾರಸ್ವಾಮಿ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಕ್ಕೆ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಗುಬ್ಬಿ ಶಾಸಕ ಶ್ರೀನಿವಾಸ್‌ ಅವರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬುದು ನಮಗೆ ಗೊತ್ತಿದೆ. ಅವರು ಬ್ಯಾಲೆಟ್‌ ಪೇಪರ್‌ ಮೇಲೆ ಹೆಬ್ಬೆಟ್ಟು ಅಡ್ಡ ಇಟ್ಟುಕೊಂಡು ತೋರಿಸಿದರು. ನಂತರ ಯಾರಿಗೂ ಮತ ಹಾಕಿಲ್ಲ ಎಂದು ಹೇಳಿದರು. ಆದ್ರೆ ಅವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ರೇವಣ್ಣ ಹೇಳಿದರು. ಬಿಜೆಪಿಯಿಂದ ಹಣ ಪಡೆದು ಗುಬ್ಬಿ ಶ್ರೀನಿವಾಸ್‌ ಮತ ಹಾಕಿದ್ದಾರೆ. ಎಷ್ಟು ಹಣ ಪಡೆದು ಮತ ಹಾಕಿದ್ದಾರೆ ಎಂಬುದನ್ನು ಮಂತ್ರಿಯೊಬ್ಬರು ನನಗೆ ಹೇಳಿದ್ದಾರೆ ಎಂದು ರೇವಣ್ಣ ಇದೇ ಸಂದರ್ಭದಲ್ಲಿ ತಿಳಿಸಿದರು.

Share Post