BengaluruHealth

ಮೂರು ಪ್ರಕರಣ ಇದ್ದರೂ ಕ್ಲಸ್ಟರ್‌ : ಸಿಎಂ ಬೊಮ್ಮಾಯಿ

ಬೆಂಗಳೂರು : ಮೂರು ಕೋವಿಡ್‌ ಪ್ರಕರಣಗಳು ಪತ್ತೆಯಾಗುವ ಎಲ್ಲ ಸ್ಥಳಗಳನ್ನೂ ʼಕೋವಿಡ್‌ ಕ್ಲಸ್ಟರ್‌ʼ ಎಂಬುದಾಗಿ ಘೋಷಿಸಿ, ಕಠಿಣ ಕ್ರಮಗಳನ್ನು ಜಾರಿಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ʼಈ ಹಿಂದೆ ಹತ್ತು ಕೋವಿಡ್‌ ಪ್ರಕರಣಗಳು ಒಂದೇ ಕಡೆ ಪಡೆಯಾದರೆ ಮಾತ್ರ ಕ್ಲಸ್ಟರ್‌ ಎಂದು ಘೋಷಿಸಲಾಗುತ್ತಿತ್ತು. ಈಗ ಮೂರು ಪ್ರಕರಣಗಳಿರುವ ಪ್ರದೇಶಗಳನ್ನು ಕ್ಲಸ್ಟರ್‌ ಎಂದು ಪರಿಗಣಿಸಿ, ಅಲ್ಲಿರುವ ಎಲ್ಲರನ್ನೂ ಪರೀಕ್ಷಿಸಲಾಗುವುದು. ಕೋವಿಡ್‌ ದೃಢಪಟ್ಟವರಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು. ಎಲ್ಲರಿಗೂ ಕೋವಿಡ್‌ ಲಸಿಕೆ ನೀಡಲಲಾಗುವುದು ಎಂದರು .

Share Post