BengaluruPolitics

ಗೃಹಲಕ್ಷ್ಮೀ ಯೋಜನೆ; ಹಣ ಜಮೆಯಾಗುತ್ತಿದ್ದಂತೆ ಬರುತ್ತೆ ಫೋನ್‌ ಕಾಲ್‌; ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು; ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗುತ್ತೆ. ಎಲ್ಲವೂ ಸುಸೂತ್ರವಾಗಿ ನಡೆಯಲು ಸಿದ್ಧತೆ ನಡೆದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಆಗಸ್ಟ್‌ 16ರಂದು ಮನೆಯೊಡತಿಯರಿಗೆ ಮೊದಲ ತಿಂಗಳ ಹಣವನ್ನು ಬ್ಯಾಂಕ್‌ಗೆ ಖಾತೆಗಳಿಗೆ ಜಮೆ ಮಾಡಲಾಗುತ್ತದೆ ಎಂದು ಹೇಳಿದರು.

ಮನೆಯೊಡತಿಯರ ಅಕೌಂಟ್‌ ಹಣ ಜಮೆಯಾಗುತ್ತಿದ್ದಂತೆ ಅವರಿಗೆ ಮೊಬೈಲ್‌ ಕರೆ ಹೋಗುವಂತೆ ಮಾಡಿದ್ದೇವೆ. ಹಣ ಜಮೆಯಾಗುತ್ತಿದ್ದಂತೆ ಫಲಾನುಭವಿಗಳ ಮೊಬೈಲ್‌ಗೆ ಕರೆ ಬರಲಿದೆ. ಅದರಲ್ಲಿ ಮೊದಲೇ ರೆಕಾರ್ಡ್‌ ಮಾಡಿಸ ವಾಯ್ಸ್‌ ಕೇಳಿಸಲಿದೆ. ನಿಮ್ಮ ಅಕೌಂಟ್‌ಗೆ ಹಣ ಗೃಹಲಕ್ಷ್ಮೀ ಹಣ ಬಂದಿದೆ ಎಂದು ಮೆಸೇಜ್‌ ಅದರಲ್ಲಿರುತ್ತದೆ ಎಂದು ಸಚಿವರು ಹೇಳಿದ್ದಾರೆ.

Share Post