Bengaluru

ಬಿಎಸ್‌ವೈ ಮನೆಗೆ ರಾಜ್ಯಪಾಲರ ಭೇಟಿ; ಸಾಂತ್ವನ ಹೇಳಿದ ಥಾವರ್‌ಚಂದ್‌

ಬೆಂಗಳೂರು: ಮೊಮ್ಮಗಳ ಸಾವಿನಿಂದ ಶೋಕಸಾಗರದಲ್ಲಿ ಮುಳುಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸಾಂತ್ವನ ಹೇಳಿದರು. ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಆಗಮಿಸಿದ್ದ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಸಂತೈಸಿದರು.

ನಿನ್ನೆ ಕೂಡಾ ರಾಜ್ಯಪಾಲರು ಬಿಎಸ್‌ವೈಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಇಂದು ಖುದ್ದಾಗಿ ಬಿಎಸ್‌ವೈ ಮನೆಗೆ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆದರು. ನಂತರ ಯಡಿಯೂರಪ್ಪರನ್ನು ಸಂತೈಸಿದರು. ಈ  ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಂಸದ ಬಿ ವೈ ರಾಘವೇಂದ್ರ ಉಪಸ್ಥಿತರಿದ್ದರು.

Share Post