BengaluruPolitics

ಮನೆ ಕೊಡಿಸಿ, ಇಲ್ಲ ವಿಷ ಕೊಡಿ; ಡಿಸಿಎಂ ಮುಂದೆ ಮಹಿಳೆ ಕಣ್ಣೀರು!

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಾಗಿಲಿಗೆ ಬಂತು ಸರ್ಕಾರ ಎಂಬ ಜನಸ್ಪಂದನಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂದು ಬೊಮ್ಮನಹಳ್ಳಿ ವಲಯ ೨ನೇ ಹಂತದ ಕಾರ್ಯಕ್ರಮ ನಡೆಯಿತು. ನಕಪುರ ರಸ್ತೆಯ ಜರಗನಹಳ್ಳಿಯ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಹಿಳೆಯೊಬ್ಬರು ನಮಗೆ ವಿಷ ಕೊಟ್ಟುಬಿಡಿ ಎಂದು ಕಣ್ಣೀರು ಹಾಕಿದ್ದಾರೆ.

ಸಿಂಗಸಂದ್ರ ನಿವಾಸಿಯಾಗಿರುವ ರತ್ನಮ್ಮ ಎಂಬುವವರು ಡಿ.ಕೆ.ಶಿವಕುಮಾರ್‌ ಬಳಿ ಗೋಳು ತೋಡಿಕೊಂಡಿದ್ದಾರೆ. ನಾನು ಹತ್ತು ವರ್ಷಗಳಿಂದ ಎಲ್ಲಾ ಕಚೇರಿಗಳನ್ನೂ ಅಲೆಯುತ್ತಿದ್ದೇನೆ. ಯಾರೂ ಕೂಡಾ ನನಗೆ ಒಂದು ಮನೆ ಮಂಜೂರು ಮಾಡಿಕೊಟ್ಟಿಲ್ಲ. ಯಾವ ಸರ್ಕಾರಿ ಸೌಲಭ್ಯವೂ ನನಗೆ ಸಿಕ್ಕಿಲ್ಲ. ದಯವಿಟ್ಟು ನನಗೆ ಒಂದು ಮನೆ ಮಂಜೂರು ಮಾಡಿಸಿ, ಇಲ್ಲದಿದ್ದರೆ ತೊಟ್ಟು ವಿಷ ಕೊಟ್ಟುಬಿಡಿ ಎಂದು ಕಣ್ಣೀರು ಹಾಕಿದ್ದಾರೆ.

ಮಹಿಳೆಯನ್ನು ಸಮಧಾನಪಡಿಸಿದ ಡಿ.ಕೆ.ಶಿವಕುಮಾರ್‌ ಅವರು, ಸಮಸ್ಯೆ ಪರಿಹರಿಸುವ ಭರವಸೆ ಕೊಟ್ಟಿದ್ದಾರೆ.

 

Share Post