BengaluruPolitics

ಡಾ.ಜಿ.ಪರಮೇಶ್ವರ್ ಗೆ ಮತ್ತೊಂದು ಮಹತ್ವದ ಜವಾಬ್ದಾರಿ

ಬೆಂಗಳೂರು; ಸದ್ಯ ರಾಜ್ಯ ಕಾಂಗ್ರೆಸ್ ನ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರುವ ಡಾ. ಜಿ ಪರಮೇಶ್ವರ್ ರವರನ್ನ ಕಾನೂನು ತಿದ್ದುಪಡಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆಮಾಡಲಾಗಿದೆ. ಇದೆ 24 ಮತ್ತು 25 ರಂದು ರಾಯ್ ಪುರ ಚತ್ತಿಸ್ಘಡ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಕಾಂಗ್ರೆಸ್ ನ 85ನೇ ಸಮಗ್ರ ಅಧಿವೇಶನ ನಡೆಯಲಿದೆ.

ಹಾಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಅಂಬಿಕಾ ಸೋನಿ ಯವರನ್ನ ಹಾಗೂ ಸಂಯೋಜಕರನ್ನಾಗಿ ರಂದೀಪ್ ಸಿಂಗ್ ಸುರ್ಜೆವಾಲರನ್ನ ನೇಮಕ ಮಾಡಲಾಗಿದೆ. ಇನ್ನು ಸಮಿತಿಯಲ್ಲಿ ಎಂಟು ಮಂದಿಯನ್ನ ನೇಮಕ ಮಾಡಲಾಗಿದೆ. ಈ ಪೈಕಿ ರಾಜ್ಯದಿಂದ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ರವರಿಗೆ ಸ್ಥಾನ ನೀಡಿದಾದರೆ.ಈ ಹಿನ್ನೆಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಡಾ. ಜಿ ಪರಮೇಶ್ವರ್ ಕೃತಜ್ಞತೆ ತಿಳಿಸಿರುವರು.

Share Post