BengaluruCinemaPolitics

ಚುನಾವಣೆಗೆ ಸ್ಪರ್ಧಿಸ್ತಿಲ್ಲ, ಸಿಎಂ ಸುದ್ದಿಗೋಷ್ಠಿಯಲ್ಲಿ ಇರ್ತೀನಿ; ನಟ ಸುದೀಪ್‌

ಬೆಂಗಳೂರು; ನಾನು ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ. ಸಿಎಂ ಸುದ್ದಿಗೋಷ್ಠಿಗೆ ನಾನು ಹೋಗುತ್ತಿದ್ದೇನೆ. ಸುದ್ದಿಗೋಷ್ಠಿಯಲ್ಲೇ ಎಲ್ಲದಲ್ಲೂ ಉತ್ತರ ಕೊಡುತ್ತೇನೆ ಎಂದು ನಟ ಸುದೀಪ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು ಬಿಜೆಪಿ ಸೇರುತ್ತಾರೆಂಬ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾರಿಗೂ ಟಿಕೆಟ್‌ ಕೇಳುತ್ತಿಲ್ಲ. ಪಕ್ಷದಿಂದ ಟಿಕೆಟ್‌ ಕೊಡಿಸುವಷ್ಟು ದೊಡ್ಡವನೂ ನಾನಲ್ಲ. ಚಿತ್ರರಂಗಕ್ಕೆ ನಾನು ಪದಾರ್ಪಣೆ ಮಾಡಿದಾಗ ಹಲವರು ನನ್ನ ಪರ ನಿಂತಿದ್ದರು. ನನ್ನವರಿಗಾಗಿ ನಾನು ಕೆಲ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದೂ ಸುದೀಪ್‌ ಹೇಳಿದ್ದಾರೆ. ಇನ್ನೊಂದೆಡೆ ಅನಾಮಿಕನೊಬ್ಬ ಬೆದರಿಕೆ ಪತ್ರ ಬರೆದಿರುವುದಕ್ಕೆ ಸುದೀಪ್‌ ಉತ್ತರ ಕೊಟ್ಟಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಚಿತ್ರರಂಗದಲ್ಲಿ ನನಗೆ ಆಗದವರು ಸಹಾ ಇದ್ದಾರೆ. ಪತ್ರ ಬರೆದವರು ಯಾರು ಅಂತಾನೂ ನನಗೆ ಗೊತ್ತು. ನಾನು ಅವರಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇನೆ ಎಂದು ಸುದೀಪ್‌ ಹೇಳಿದ್ದಾರೆ. ಯಾರಿಗೆ ಯಾವ ಮಾರ್ಗದಲ್ಲಿ ಉತ್ತರ ನೀಡಬೇಕೋ ನೀಡುತ್ತೇನೆ ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

Share Post