BengaluruCrime

ನಡು ರಸ್ತೆಯಲ್ಲೇ ಬೋರ್ ಕೊರೆಸಿದ ಖಾಸಗಿ ವ್ಯಕ್ತಿ!

ಬೆಂಗಳೂರು; ವ್ಯಕ್ತಿಯೊಬ್ಬ ನಡು ರಸ್ತೆಯಲ್ಲೇ ಬೋರ್ ವೆಲ್ ಕೊರೆಸಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದಲ್ಲಿ ನಡೆದಿದೆ.. ಇದೇ ವ್ಯಾಪ್ತಿಯ ಮತ್ತೊಂದು ಕಡೆಯೂ ಇದೇ ರೀತಿಯ ಪ್ರಕರಣ ನಡೆದಿದ್ದು, ಬಿಬಿಎಂಪಿ ಅಧಿಕಾರಿಗಳು fir ದಾಖಲು ಮಾಡಿದ್ದಾರೆ..

   ಹೇರೋಹಳ್ಳಿ ವಾರ್ಡ್‌ ವೀರಭದ್ರೇಶ್ವರನಗರದ ಓಂ ಸಾಯಿ ಪಬ್ಲಿಕ್ ಮುಖ್ಯರಸ್ತೆಯಲ್ಲಿ ಅಕ್ಟೋಬರ್‌ 3 ಅನಧಿಕೃತವಾಗಿ ಕೊಳವೆ ಬಾವಿ ಕೊರೆಸಲಾಗಿದೆ. 4ರಂದು ಮತ್ತೊಂದು ಕೊಳವೆಬಾವಿಯನ್ನು ಕೊರೆಯಲಾಗಿದೆ. ಖಾಸಗಿಯವರು ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕೊಳವೆ ಬಾವಿ ಕೊರೆಸಿದ್ದಾರೆ..

   ಈ ಬಗ್ಗೆ ಸ್ಥಳೀಯರಿಂದ ದೂರು ಸ್ವೀಕರಿಸಿದ ಬಿಬಿಎಂಪಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.. ಸಾರ್ವಜನಿಕ ರಸ್ತೆಯನ್ನು ಅಗೆದು, ಕೊಳವೆ ಬಾವಿ ಕೊರೆದು ರಸ್ತೆ ಹಾಳು ಮಾಡಲಾಗಿದೆ. ಜಯರಾಜ್‌, ಧನಂಜಯ, ಪ್ರಕಾಶ್‌ ಅವರ ವಿರುದ್ಧ ಕೇಸ್ ದಾಖಲಾಗಿದೆ.

 

Share Post