Bengaluru

ಗಲಾಟೆ ವಿಚಾರವಾಗಿ ನಲಪಾಡ್‌ ಪರ ಡಿಕೆಶಿ ಬ್ಯಾಟಿಂಗ್

ಬೆಂಗಳೂರು: ಕಾಂಗ್ರೆಸ್‌ ಕಾರ್ಯಕರ್ತರೊಬ್ಬರ ಮೇಲೆ ನಲಪಾಡ್‌ ಬೆಂಬಲಿಗರು ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ನೋಡ್ರಪ್ಪಾ…ಯಾವ ಗಲಾಟೆನೂ ನಡೆದಿಲ್ಲ. ಸುಮ್ಮನೆ ಯಾರೋ ಬೇಕಂತ ಸುಳ್ಳು ಸುದ್ದಿ ಹಬ್ಬಸಿದ್ದಾರೆ. ಈ ಬಗ್ಗೆ ನಾನು ಹೈದರಾಬಾದ್‌ನಿಂದ ಬರುವಾಗ ಕ್ರಾಸ್‌ ಚೆಕ್‌ ಮಾಡಿದೆ. ಗಲಾಟೆ ನಡೆದಿಲ್ಲ ಎಂಬ ವಿಚಾರ ತಿಳಿದಿದೆ. ವಿಚಾರ ತಿಳಿಯುತ್ತಿದ್ದಂತೆ ನಾನು ಸಿದ್ದು ಹಳ್ಳೇಗೌಡರ ಜೊತೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಅವರ ಫೋನ್‌ ತಗೊಂಡು ಯಾರೋ ವಿಡಿಯೋ ಅಪ್‌ಲೋಡ್‌ ಮಾಡಿದ್ದಾರಂತೆ. ಅದಕ್ಕೆ ಅವರು ಅದನ್ನು ಡಿಲೀಟ್‌ ಮಾಡಿದ್ದಾರೆ.

ಆ ಹುಡುಗ ಏನೋ ಒಳ್ಳೆಯ ಕೆಲಸ ಮಾಡ್ತಿದ್ದಾನೆ. ಏನಾದ್ರು ಕೆಲಸ ಮಾಡುವವರ ವಿರುದ್ಧ ಇಂತಹ ಆರೋಪಗಳೆಲ್ಲ ಸಹಜ. ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ನಾನು ಮೂಗು ತೂರಿಸುವುದಿಲ್ಲ. ಪಕ್ಷಕ್ಕೆ ಕೆಟ್ಟ ಹೆಸರು ಬರುವಂತೆ ವರ್ತನೆ ಮಾಡಿದ್ರೆ ಮಾತ್ರ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

Share Post