BengaluruCrimePolitics

ಶಾಸಕ ಸತೀಶ್‌ ರೆಡ್ಡಿ ಹತ್ಯೆಗೆ ಸ್ಕೆಚ್‌ ಹಾಕಿದನಾ ವಿಲ್ಸನ್ ಗಾರ್ಡನ್ ನಾಗ..?

ಬೆಂಗಳೂರು; ಬಿಜೆಪಿಯ ಶಾಸಕ ಸತೀಶ್‌ ರೆಡ್ಡಿಯನ್ನ ಹತ್ಯೆಗೆ ಸ್ಕಚ್‌ ಹಾಕಲಾಗಿತ್ತಾ ? ಸುಪಾರಿ ಪಡೆದು ಕೊಲೆ ಮಾಡೋದ್ರ ಬಗ್ಗೆ ಮಾತನಾಡಿರೋ ಆಡಿಯೋ ಪೊಲೀಸರ ಕೈಗೆ ಸಿಕ್ಕಿದೆ.
ಶಾಸಕರನ್ನ ಹತ್ಯಮಾಡಲು ಎರಡು ಕೋಟಿಗೆ ಸುಪಾರಿ ಪಡೆದಿದ್ದರು ಎಂಬ ಅನುಮಾವ ವ್ಯಕ್ತವಾಗುತ್ತಿದೆ .ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲೀಸರು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡಸುತಿದ್ದಾರೆ ಈ ವೇಳೆ ಹಲವು ಅಂಶಗಳು ಬೆಳಕಿಗೆ ಬಂದಿದೆ.

ಆರೋಪಿ ಗಿರೀಶ್ ಹಾಗೂ ಅಪ್ರಾಪ್ತ ಬಾಲಕ ವಿಚಾರಣೆ ವೇಳೆ ಎಷ್ಟು ಹಣಕ್ಕೆ ಸುಪಾರಿಯನ್ನ ಪಡೆದಿದ್ದಾರೆ ಎಂದು ಆರೋಪಿಗಳು ಯಾವುದೇ ಮಾಹಿತಿ ನೀಡಿಲ್ಲ ಆದರೆ ಆರೋಪಿಗಳು ಮಾತನಾಡಿದ ಆಡಿಯೂ ಪೋಲೀಸರ ಬಳಿ ಇದೆ ಇದರ ಆದಾರದ ಮೇಲೆ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹೆಸರು ಕೇಳಿಬಂದಿದೆ. ಪೊಲೀಸರು ಆರೋಪಿಗಳ ಆರು ತಿಂಗಳ ಮೊಬೈಲ್ ಕಾಲ್ ಲಿಸ್ಟ್ ಪಡೆದು ತನಿಖೆ ಮುಂದಾಗಿದ್ದಾರೆ. ಆರೋಪಿಗಳು ಯಾರೆಲ್ಲರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ರು ಅಂತ ಪರಿಸೀಲಿಸುತಿದ್ದಾರೆ. ಇನ್ನು ಆರೋಪಿ ಗಿರೀಶ್ ವಿಲ್ಸನ್ ಗಾರ್ಡನ್ ನಾಗನ ಆಪ್ತ. ಇದೇ ಕಾರಣಕ್ಕೆ ಪೋಲೀಸರು ವಿಲ್ಸನ್ ಗಾರ್ಡನ್ ನಾಗ ಪಾತ್ರ ಇದೆಯಾ ಅಂತಾನೂ ವಿಚಾರಣೆ ನಡೆಸುತಿದ್ದಾರೆ.

Share Post