BengaluruPolitics

ಮತ್ತೆ ಆಕ್ಟೀವ್‌ ಆದ ಸೈಲೆಂಟ್‌ ಸುನೀಲ; ಚಾಮರಾಜಪೇಟೆಯಲ್ಲಿ ಗಲ್ಲಿ ಗಲ್ಲಿ ಸುತ್ತಾಟ

ಬೆಂಗಳೂರು; ರೌಡಿ ಶೀಟರ್‌ ಸೈಲೆಂಟ್‌ ಸುನೀಲ ರಾಜಕೀಯದಲ್ಲಿ ಫುಲ್‌ ಅಲರ್ಟ್‌ ಆಗಿದ್ದಾನೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಸೈಲೆಂಟ್‌ ಸುನೀಲ ಗಲ್ಲಿ ಗಲ್ಲಿ ಸುತ್ತಾಡುತ್ತಿದ್ದು, ಈ ಬಾರಿ ಸೈಲೆಂಟ್‌ ಸುನೀಲ ಚುನಾವಣೆಗೆ ಸ್ಪರ್ಧೆ ಮಾಡೋದು ಬಹುತೇಕ ಕನ್ಫರ್ಮ್‌ ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲೂ ಸೈಲೆಂಟ್‌ ಸುನೀಲ ಫುಲ್‌ ಅಲರ್ಟ್‌ ಆಗಿದ್ದಾನೆ. ಏ ಸುನಿಲ್‌ ಕುಮಾರ್‌ ಫಾರ್‌ ಚಾಮರಾಜಪೇಟೆ ಅಂತ ಫೇಸ್‌ ಬುಕ್‌ನಲ್ಲಿ ಸುನೀಲನ ಫ್ಯಾನ್ಸ್‌ ಪೇಜ್‌ ಓಪನ್‌ ಆಗಿದೆ. ಇದರಲ್ಲಿ ಸುನೀಲನ ಕ್ಯಾಂಪೇನ್‌ ಎಲ್ಲಾ ಮಾಹಿತಿ ಹಂಚಿಕೆಯಾಗುತ್ತಿದೆ. ಜೊತೆಗೆ ಸೈಲೆಂಟ್‌ ಸುನೀಲ ಸ್ವತಃ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾನೆ. ಇತ್ತೀಚೆಗಷ್ಟೇ ಸೈಲೆಂಟ್‌ ಸುನೀಲ ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದ. ಈ ಬೆನ್ನಲ್ಲೇ ವಿಪಕ್ಷಗಳು ಈ ಬಗ್ಗೆ ಆಕ್ರೋಶ ಹೊರಹಾಕಿದ್ದವು. ಅನಂತರ ಸೈಲೆಂಟ್‌ ಆಗಿದ್ದ ಸುನೀಲ ಇದೀಗ ಪ್ರಚಾರ ಶುರು ಮಾಡಿದ್ದಾನೆ. ಆಟೋಗಳ ಮೇಲೂ ಬರಹಗಳನ್ನು ಬರೆಯಲಾಗಿದೆ.

ಸೈಲೆಂಲ್‌ ಸಿನೀಲ ಬಿಜೆಪಿಯಿಂದ ಟಿಕೆಟ್‌ ಬಯಸುತ್ತಿದ್ದಾನೆ. ಒಂದು ವೇಳೆ ಟಿಕೆಟ್‌ ಸಿಗದೇ ಹೋದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಾನೆ ಎಂದು ಹೇಳಲಾಗುತ್ತಿದೆ.

Share Post