BengaluruPolitics

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರ ನೇಮಕ

ಬೆಂಗಳೂರು : ಲೋಕಸಭಾ ಚುನಾವಣೆಗೆ ಏಳು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಎಲೆಕ್ಷನ್‌ಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕೃತವಾಗಿ ತಯಾರಿ ಆರಂಭಿಸಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದ್ದು, ಆಯಾ ಕ್ಷೇತ್ರದ ಎಲ್ಲ ಹಂತಗಳ ಮುಖಂಡರನ್ನು ಸಂಪರ್ಕಿಸಿ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲು ಮುಂದಾಗಿದೆ.

28 ಲೋಕಸಭಾ ಕ್ಷೇತ್ರಗಳಿಗೆ 28 ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ. ಆಯಾ ಕ್ಷೇತ್ರಗಳಿಗೆ ನೇಮಕವಾದ ವೀಕ್ಷಕರು ತಮಗೆ ವಹಿಸಿದ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿ, ಕೆಪಿಸಿಸಿಗೆ ವರದಿ ನೀಡಲು ಸೂಚಿಸಲಾಗಿದೆ. ಕ್ಷೇತ್ರವಾರು ವೀಕ್ಷಕರ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

 

ಯಾವ ಕ್ಷೇತ್ರಕ್ಕೆ ಯಾರು ವೀಕ್ಷಕರು?

ಬಾಗಲಕೋಟೆ – ಪ್ರಿಯಾಂಕ ಖರ್ಗೆ

ಬೆಂಗಳೂರು ಕೇಂದ್ರ – ಎನ್‌ಎಸ್ ಬೋಸರಾಜು

ಬೆಂಗಳೂರು ಉತ್ತರ – ಡಾ ಜಿ ಪರಮೇಶ್ವರ್‌

ಬೆಂಗಳೂರು ಗ್ರಾಮಾಂತರ – ಕೆ ವೆಂಕಟೇಶ್

ಬೆಂಗಳೂರು ದಕ್ಷಿಣ – ಡಾ ಶರಣಪ್ರಕಾಶ ಪಾಟೀಲ್‌

ಬೆಳಗಾವಿ – ಶಿವರಾಜ್ ತಂಗಡಗಿ

ಗುಲ್ಬರ್ಗಾ – ಬಿ ನಾಗೇಂದ್ರ

ಬೀದರ್ – ಸಂತೋಷ್‌ ಎಸ್‌ ಲಾಡ್‌

ವಿಜಯಪುರ – ಸತೀಶ್‌ ಜಾರಕಿಹೊಳಿ

ಚಾಮರಾಜನಗರ – ದಿನೇಶ್‌ ಗುಂಡೂರಾವ್‌

ಚಿಕ್ಕಬಳ್ಳಾಪುರ – ಜಮೀರ್‌ ಅಹ್ಮದ್‌ಖಾನ್‌

ಚಿಕ್ಕೋಡಿ – ಡಿ ಸುಧಾಕರ್‌

ಚಿತ್ರದುರ್ಗ – ಎಚ್‌ಸಿ ಮಹದೇವಪ್ಪ

ದಕ್ಷಿಣ ಕನ್ನಡ – ಮಧು ಬಂಗಾರಪ್ಪ

ದಾವಣಗೆರೆ – ಈಶ್ವರ್‌ ಖಂಡ್ರೆ

ಧಾರವಾಡ – ಲಕ್ಷ್ಮೀ ಹೆಬ್ಬಾಳ್ಕರ್‌

ಬಳ್ಳಾರಿ – ಶಿವಾನಂದ ಪಾಟೀಲ್‌

ಹಾಸನ – ಎನ್‌ ಚಲುವರಾಯಸ್ವಾಮಿ

ಹಾವೇರಿ – ಎಸ್‌ಎಸ್‌ ಮಲ್ಲಿಕಾರ್ಜುನ

ಕೋಲಾರ – ರಾಮಲಿಂಗಾರೆಡ್ಡಿ

ಕೊಪ್ಪಳ – ಆರ್‌ಬಿ ತಿಮ್ಮಾಪುರ

ಮಂಡ್ಯ – ಡಾ ಎಂಸಿ ಸುಧಾಕರ್

ಮೈಸೂರು – ಬೈರತಿ ಸುರೇಶ್‌

ರಾಯಚೂರು – ಕೆಎಚ್‌ ಮುನಿಯಪ್ಪ

ಶಿವಮೊಗ್ಗ – ಕೆಎನ್ ರಾಜಣ್ಣ

ತುಮಕೂರು – ಕೃಷ್ಣ ಬೈರೇಗೌಡ

ಉಡುಪಿ – ಚಿಕ್ಕಮಗಳೂರು – ಮಂಕಾಳ ವೈದ್ಯ

ಉತ್ತರ ಕನ್ನಡ – ಎಚ್‌ಕೆ ಪಾಟೀಲ್‌

Share Post