BengaluruDistrictsPolitics

CM Bommai: ಕಳೆಗುಂದಿದ ಸಿಎಂ ಬೊಮ್ಮಾಯಿ ಮುಖ; ಸವದತ್ತಿ ಯಲ್ಲಮ್ಮನ ಮೊರೆ

ಬೆಳಗಾವಿ; ಮತದಾನ ಮುಗಿದು, ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳೂ ಕಾಂಗ್ರೆಸ್‌ ಪರ ವರದಿ ನೀಡಿವೆ. ಹೀಗಿದ್ದರೂ ಬಿಜೆಪಿ ನಾಯಕರು ಸಮೀಕ್ಷೆಗಳನ್ನು ಒಪ್ಪುತ್ತಿಲ್ಲ. ಈಗಲೂ ನಾವೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಇದನ್ನೇ ಹೇಳುತ್ತಿದ್ದಾರೆ. ಆದರೆ ಅವರ ಮುಖದಲ್ಲಿ ಕಳೆ ಕಡಿಮೆಯಾಗಿದೆ. ಸೊರಗಿದಂತೆ ಕಾಣುತ್ತಿದ್ದಾರೆ. ಇದರ ನಡುವೆ ಅವರು ಸವದತ್ತಿ ಯಲ್ಲಮ್ಮನ ಮೊರೆ ಹೋಗಿದ್ದಾರೆ.

ಇಂದು ಪತ್ನಿ ಚನ್ನಮ್ಮ ಜೊತೆ ಸವದತ್ತಿಗೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿಯವರು ಯಲ್ಲಮ್ಮನ ದರ್ಶನ ಪಡೆದುಕೊಂಡರು. ಇಷ್ಟಾರ್ಥಸಿದ್ಧಿಗಾಗಿ ಚನ್ನಮ್ಮನ ಬಳಿ ಬೇಡಿಕೊಂಡರು. ಇದೇ ವೇಳೆ ಸಚಿವ ಸಿ.ಸಿ.ಪಾಟೀಲ್‌ ಕೂಡಾ ಜೊತೆಗಿದ್ದರು.

Share Post