Districts

ಕಾಂಗ್ರೆಸ್‌ ದ್ವಂದ್ವ ಹೇಳಿಕೆಯನ್ನು ನಿಲ್ಲಿಸಲಿ: ಸಚಿವ ಈಶ್ವರಪ್ಪ ಕಿಡಿ

ಬೆಳಗಾವಿ: ಎಂಇಎಸ್‌ ಪುಂಡಾಟಕ್ಕೆ ರೋಸಿ ಹೋಗಿರುವ ಕನ್ನಡಿಗರು ಶಿವಸೇನೆ ಸಂಘಟನೆಯನ್ನು ರಾಜ್ಯದಲ್ಲಿ ಬ್ಯಾನ್‌ ಮಾಡಲು ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಆದ್ರೆ ಇದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ ಅಂತ ಕಾಣುತ್ತೆ ಎಂದು ಮಂಗಳವಾರ ಬೆಳಗಾವಿಯಲ್ಲಿ ಸಚಿವ ಕೆ.ಎಸ್ಈಶ್ವರಪ್ಪ ಹೇಳಿದ್ರು. ನಿನ್ನೆ ಯಾರೋ ನಾಲ್ಕು ಜನ ಮಾಡಿದ ಕೆಲಸಕ್ಕೆ ಎಂಇಎಸ್‌ ಬ್ಯಾನ್‌ ಮಾಡೋದು ಸರಿಯಲ್ಲ ಎಂಬ ಡಿಕೆಶಿ ಹೇಳಿಕೆಗೆ ಕಿಡಿಕಾರಿ ಈಶ್ವರಪ್ಪ, ಮೊದಲು ಕಾಂಗ್ರೆಸ್‌ನವರು ಈ ರೀತಿಯ ದ್ವಂದ್ವ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ. ನಮ್ಮ ದೇಶಭಕ್ತರ ಪ್ರತಿಮೆಗಳನ್ನು ಅಪಮಾನ ಮಾಡಿದ ಕೆಲಸ ಮಾಡಿದವರನ್ನು ಹೇಗೆ ಬಿಡುವುದು.

ಅಲ್ಲದೆ ಕರ್ನಾಟಕದಲ್ಲಿ ಎಂಇಎಸ್‌ ನಿಂದ ಪದರತಿದಿನ ಒಂದಲ್ಲಾ ಒಂದು ಪುಂಡಾಟದ ಕೆಲಸ ನಡೆಯುತ್ತಲೇ ಇವೆ ಅವರಿಗೆ ನಿಷೇಧ ಹೇರುವುದೇ ತಕ್ಕ ಶಾಸ್ತಿ ಎಂದ್ರು. ಈ ವಿಚಾರ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ನಾಯಕರು ಒಂದಾಗಿ ಖಂಡನಾ ನಿರ್ಣಯವನ್ನು ಮಾಡಲಾಗಿದೆ. ಇದನ್ನು ಪ್ರಧಾನಿ ಮೋದಿಯವರ ಗಮನಕ್ಕೆ ಕೂಡ ತರಲಾಗುವುದು ಎಂದ್ರು. ಕಾಂಗ್ರೆಸ್‌ ಈ ನೀತಿಗೆ ಕಾರಣ ತಮ್ಮ ಪಕ್ಷದ ಶಾಸಕರನ್ನು ಓಲೈಕೆ ಮಾಡುವ ಕೆಲಸ ಮಾಡ್ತಿದ್ದಾರೆ. ಯಾಕಂದ್ರೆ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಸುಮಾರು ಜನ ಶಿವಸೇನೆ ಬೆಂಬಲಿಗರೇ ಇದ್ದಾರೆ ಅವರನ್ನು ಒಲಿಸಿಕೊಳ್ಳುವುದು ಬಿಟ್ರೆ ಬೇರೆ ದಾರಿ ಇಲ್ಲ ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

 

Share Post